Asianet Suvarna News Asianet Suvarna News

ಮುಂದುವರಿದ ವರ್ಗಾವಣೆ ಪರ್ವ: 5 DySP, 18 ಇನ್ಸ್​​ಪೆಕ್ಟರ್​ಗಳ ಎತ್ತಂಗಡಿ

ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದ್ದು, 5 DySP, 18 ಇನ್ಸ್​​ಪೆಕ್ಟರ್​ಗಳ ಎತ್ತಂಗಡಿ ಮಾಡಿದೆ. ಇದರ ಮತ್ತಷ್ಟು ವಿವರ ಇಲ್ಲಿದೆ.

karnataka government transferred Five DySP and 18 police Inspectors
Author
Bengaluru, First Published Oct 30, 2018, 8:25 PM IST

ಬೆಂಗಳೂರು, [ಅ.30]: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರಿದಿದೆ.

ಇಂದು [ಮಂಗಳವಾರ] ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದ್ದು, ಐವರು DySP, 18 ಇನ್ಸ್​​ಪೆಕ್ಟರ್​ಗಳ ವರ್ಗಾವಣೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ರಾಮೇಗೌಡ ಎ. ಹಟ್ಟಿ - ಧಾರವಾಡ ಗ್ರಾಮಾಂತರ ಉಪವಿಭಾಗ, ವಿಶ್ವನಾಥ್ ರಾವ್​​ - ಸಿಂಧನೂರು ಉಪವಿಭಾಗ, ರಾಯಚೂರು ಜಿಲ್ಲೆ, ಶ್ರೀಕಾಂತ್​ ಭೀಮಪ್ಪ ಕಟ್ಟಿಮನಿ - ಹುಬ್ಬಳ್ಳಿ ದಕ್ಷಿಣ ಉಪವಿಭಾಗ, ಮಂಜುನಾಥ್ ಗನಗಲ್​ - ದಾರಣಗೆರೆ ಗ್ರಾಮಾಂತರ ಉಪವಿಭಾಗ, ವೆಂಕಟಸ್ವಾಮಿ ಎಸ್​​.ಡಿ - ತುಮಕೂರು ಗ್ರಾ. ಉಪವಿಭಾಗ(ಶಿರಾ) ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

Follow Us:
Download App:
  • android
  • ios