ಮುಂದುವರಿದ ವರ್ಗಾವಣೆ ಪರ್ವ: 5 DySP, 18 ಇನ್ಸ್ಪೆಕ್ಟರ್ಗಳ ಎತ್ತಂಗಡಿ
ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದ್ದು, 5 DySP, 18 ಇನ್ಸ್ಪೆಕ್ಟರ್ಗಳ ಎತ್ತಂಗಡಿ ಮಾಡಿದೆ. ಇದರ ಮತ್ತಷ್ಟು ವಿವರ ಇಲ್ಲಿದೆ.
ಬೆಂಗಳೂರು, [ಅ.30]: ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರಿದಿದೆ.
ಇಂದು [ಮಂಗಳವಾರ] ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದ್ದು, ಐವರು DySP, 18 ಇನ್ಸ್ಪೆಕ್ಟರ್ಗಳ ವರ್ಗಾವಣೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ರಾಮೇಗೌಡ ಎ. ಹಟ್ಟಿ - ಧಾರವಾಡ ಗ್ರಾಮಾಂತರ ಉಪವಿಭಾಗ, ವಿಶ್ವನಾಥ್ ರಾವ್ - ಸಿಂಧನೂರು ಉಪವಿಭಾಗ, ರಾಯಚೂರು ಜಿಲ್ಲೆ, ಶ್ರೀಕಾಂತ್ ಭೀಮಪ್ಪ ಕಟ್ಟಿಮನಿ - ಹುಬ್ಬಳ್ಳಿ ದಕ್ಷಿಣ ಉಪವಿಭಾಗ, ಮಂಜುನಾಥ್ ಗನಗಲ್ - ದಾರಣಗೆರೆ ಗ್ರಾಮಾಂತರ ಉಪವಿಭಾಗ, ವೆಂಕಟಸ್ವಾಮಿ ಎಸ್.ಡಿ - ತುಮಕೂರು ಗ್ರಾ. ಉಪವಿಭಾಗ(ಶಿರಾ) ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.