5 ಕೋಟಿ ರೂ. ತೆರಿಗೆ ವಂಚನೆ: ತುಮಕೂರು ಕಾಂಗ್ರೆಸ್ ಮುಖಂಡ ಜೈಲಿಗೆ
ಆದಾಯ ತೆರಿಗೆ ವಂಚನೆ ಆರೋಪದಡಿ ಕಾಂಗ್ರೆಸ್ ನಾಯಕರೊಬ್ಬರು ಪರಪ್ಪನ ಅಗ್ರಹಾರ ಸೇರಿದ್ದಾರೆ.
ಬೆಂಗಳೂರು[ಮಾ.27] ಆದಾಯ ತೆರಿಗೆ ವಂಚನೆ ಆರೋಪದಡಿ ಕಾಂಗ್ರೆಸ್ ಮುಖಂಡರೊಬ್ಬರನ್ನು ಬಂಧಿಸಲಾಗಿದೆ. 5.30 ಕೋಟಿ ರೂಪಾಯಿ ಐಟಿ ವಂಚನೆ ಆರೋಪದಡಿ ಕಾಂಗ್ರೆಸ್ ಮುಖಂಡ ತುಮಕೂರು ಮೂಲದ ಪ್ರಭಾಕರ್ ರೆಡ್ಡಿ ಬಂಧನ ಮಾಡಲಾಗಿದೆ.
ಹಲವು ಬಾರಿ ಐಟಿ ನೋಟಿಸ್ ನೀಡಿದ್ದರೂ ಆದಾಯ ತೆರಿಗೆ ಪಾವತಿಸದ ರಾಜಕಾರಣಿ ಇದೀಗ ಪರಪ್ಪನ ಅಗ್ರಹಾರ ಸೇರಿದ್ದಾರೆ.ರಾಜಕಾರಣಿಯನ್ನು ವಿಚಾರಣೆ ನಡೆಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ.