Asianet Suvarna News Asianet Suvarna News

'ಸರ್ಕಾರ ಕೆಡವಲು ಹೊರಟಿರುವರಿಗೆ ಬುದ್ಧಿ ಕಲಿಸಲು ಈ ಚುನಾವಣೆ ದಿಕ್ಸೂಚಿ'

ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಇಂದು ಶಿವಮೊಗ್ಗದಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 

Karnataka CM HD Kumaraswamy Slam BJP at Shivamogga
Author
Bengaluru, First Published Oct 16, 2018, 5:26 PM IST

ಶಿವಮೊಗ್ಗ, [ಅ.16]: ಮಧು ಬಂಗಾರಪ್ಪನವರು ಚುನಾವಣೆಗೆ ನಿಲ್ಲಲು ನಾವು ದೇವೇಗೌಡರು ಒತ್ತಾಯ ಮಾಡಿದ್ದೇವೆ. ಮಧು ಒಳ್ಳೆ ಹುಡುಗ ಉತ್ತಮ ಹೃದಯವಂತ ಆತನನ್ನು ಗೆಲ್ಲಿಸಿ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಮನವಿ ಮಾಡಿದರು.

ಶಿವಮೊಗ್ಗದಲ್ಲಿ ಇಂದು [ಮಂಗಳವಾರ] ಮಧು ಬಂಗಾರಪ್ಪ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, 20ನೇ ತಾರೀಕು ನಂತರ ಶಿವಮೊಗ್ಗ ಜಿಲ್ಲೆಯ ಹಳ್ಳಿ-ಹಳ್ಳಿ ಸುತ್ತುತ್ತೇನೆ. ಮುಂದಿನ ಕೇಂದ್ರ ಸರ್ಕಾರದ ಭವಿಷ್ಯದ ಬದಲಾವಣೆಗೆ ಈ ಚುನಾವಣೆ ಮೂಲ. ಪಾಪದ ಹಣದ ಮೂಲಕ ಸರ್ಕಾರ ಕೆಡವಲು ಹೊರಟಿರುವವರಿಗೆ ಬುದ್ದಿ ಕಲಿಸಲು ಈ ಚುನಾವಣೆ ದಿಕ್ಸೂಚಿ.

ಇದು ಕಾಂಗ್ರೆಸ್ ಜೆಡಿಎಸ್ ಸರ್ಕಾರವಲ್ಲ ನಿಮ್ಮ ಸರ್ಕಾರ. ಬಂಗಾರಪ್ಪನವರು ಕೊಟ್ಟಂತಹ ಕೊಡುಗೆ ಆಪಾರ.ಹಾಗಾಗಿ ಈ ಜಿಲ್ಲೆಯಲ್ಲಿ ಬಂಗಾರಪ್ಪನ ಕುಟುಂಬವನ್ನು ಉಳಿಸಲು ಕುಮಾರಸ್ವಾಮಿ ಮನವಿ ಮಾಡಿದರು. 

Follow Us:
Download App:
  • android
  • ios