ಕಾಂಗ್ರೆಸ್ ಪಾಲಿಗಿರೋದು 6, ಸಂಪುಟಕ್ಕೆ ಯಾರ್ಯಾರು? ಫೈನಲ್ ಲಿಸ್ಟ್
ಸಚಿವ ಸಂಪುಟ ವಿಸ್ತರಣೆಗೆ ನಿಗದಿ ಮಾಡಿರುವ ದಿನಾಂಕ ಹತ್ತಿರ ಬಂದಂತೆ ಆಕಾಂಕ್ಷಿಗಳ ಪಟ್ಟಿಯೂ ದೊಡ್ಡದಾಗುತ್ತಿದೆ. ಆಕಾಂಕ್ಷಿಗಳ ಪಟ್ಟಿಯಲ್ಲಿ ಹೊಸ ಹೊಸ ಹೆಸರುಗಳು ಸೇರ್ಪಡೆಯಾಗುತ್ತಿದೆ.
ಬೆಳಗಾವಿ(ಡಿ.18) ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ನಲ್ಲಿ ಹಲವರಿಂದ ಪೈಪೋಟಿ ಆರಂಭವಾಗಿದೆ. ಖಾಲಿ ಇರುವ 6 ಸಚಿವ ಸ್ಥಾನಕ್ಕೆ ಸುಮಾರು ಒಂದು ಡಜ್ಜನ್ ಶಾಸಕರು ರೇಸ್ನಲ್ಲಿದ್ದಾರೆ.
ಲಿಂಗಾಯತ ಕೋಟಾದಲ್ಲಿ ಬಿಸಿ .ಪಾಟೀಲ್, ಎಚ್ಕೆ .ಪಾಟೀಲ್, ಬಿಕೆ.ಸಂಗಮೇಶ್, ಕುರುಬ ಸಮುದಾಯದ ಕೋಟಾದಲ್ಲಿ ಎಂಟಿಬಿ ನಾಗರಾಜ್ ಹೆಸರಿದೆ. ಇನ್ನು ಅಲ್ಪಸಂಖ್ಯಾತ ಕೋಟಾದಲ್ಲಿ ರೋಷನ್ ಬೇಗ್, ತನ್ವೀರ್ ಸೇಠ್ ನಡುವೆ ಸ್ಪರ್ಧೆ ಏರ್ಪಟ್ಟಿದೆ.
ಸ್ಥಾನ ಕಳೆದುಕೊಳ್ಳಲಿದ್ದಾರಾ ಸಚಿವರು..?
ಇದಲ್ಲದೆ ಜಿಲ್ಲಾವಾರು ಸಹ ಹೋರಾಟ ಏರ್ಪಟ್ಟಿದ್ದು ಬಳ್ಳಾರಿ ಜಿಲ್ಲೆ ಕೋಟಾದಲ್ಲಿ ಇ.ತುಕಾರಾಂ ಹಾಗೂ ಬಿ.ನಾಗೇಂದ್ರ ಸಚಿವ ಸ್ಥಾನಕ್ಕಾಗಿ ಪೈಪೋಟಿ ನೀಡುತ್ತಿದ್ದಾರೆ.
ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ಆರ್.ಬಿ.ತಿಮ್ಮಾಪುರ, ರಾಮಲಿಂಗಾರೆಡ್ಡಿ ಹೊಸ ಮುಖಗಳಾದ ಸಿ.ಎಸ್.ಶಿವಳ್ಳಿ, ರಹೀಂಖಾನ್ ಹಾಗೂ ರೂಪಾ ಶಶಿಧರ್ ಹೆಸರು ಸಹ ಸಚಿವ ಸ್ಥಾನದ ರೇಸ್ನಲ್ಲಿದ್ದಾರೆ.
ರಾಷ್ಟ್ರ ರಾಜಕಾರಣಕ್ಕೆ ಸಚಿವ ರಮೇಶ್ ಜಾರಕಿಹೊಳಿ ಹೊರಟರು