ಹವಾಮಾನ ಮುನ್ಸೂಚನೆಗೆ ಆ್ಯಪ್
ಪ್ರಸಕ್ತ ಸಾಲಿನ ಆಯವ್ಯಯವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ್ದು, ಕಂದಾಯ ಇಲಾಖೆಗೆ ಬಜೆಟ್ನಲ್ಲಿ 6642 ಕೋಟಿ ಅನುದಾನ ನೀಡಿದ್ದಾರೆ. ಇಲ್ಲಿದೆ ಬಜೆಟ್ ಹೈಲೈಟ್ಸ್:
- ಕಂದಾಯ ಇಲಾಖೆಗೆ ಬಜೆಟ್ನಲ್ಲಿ 6642 ಕೋಟಿ ಅನುದಾನ
- ವಾಸ ಪ್ರಮಾಣ ಪತ್ರಗಳನ್ನು ತಕ್ಷಣವೇ ನೀಡಲು 'ಈ ಕ್ಷಣ' ಯೋಜನೆ
- ಭೂ ಮಾಪನಾ ಇಲಾಖೆ ವತಿಯಿಂದ ಐದು ಮೊಬೈಲ್ ಆ್ಯಪ್ ಗಳ ಅಭಿವೃದ್ಧಿ
- ಮೂರು ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಲ್ಯಾಂಡ್ ಟೈಟಲಿಂಗ್ ಯೋಜನೆ
- ದಾಖಲೆ ರಹಿತ ಜನವಸತಿಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತನೆ
- 2500 ಗ್ರಾಮಗಳನ್ನು ಪೋಡಿ ಮುಕ್ತಗೊಳಿಸಲಾಗುವುದು
- ವೃದ್ಧಾಪ್ಯ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ ಯೋಜನೆಗಳ ಪಿಂಚಣಿ ಮೊತ್ತ 500 ರಿಂದ 600ಕ್ಕೆ ಏರಿಕೆ
- ಇದರಿಂದ 48 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದ್ದು 576 ಕೋಟಿ ವೆಚ್ಚ
- ರುದ್ರಭೂಮಿಗಳಿಗೆ ಜಮೀನು ಖರೀದಿ ಮಾಡಲು 10 ಕೋಟಿ
- ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ಕಾಫಿ ಬೆಳೆದಿರುವವರಿಗೆ 10 ಎಕರೆವರೆಗೆ ಗುತ್ತಿಗೆ ನೀಡಲು ನಿಯಮ
- ಕಾವೇರಿ ತಂತ್ರಾಂಶವನ್ನು ಬಿಬಿಎಂಪಿಯ ಜಿಐಎಸ್ ಡಾಟಾ ಬೇಸ್ ಜೊತೆ ಸಂಯೋಜನೆಗೆ 3 ಕೋಟಿ
- ಹವಾಮಾನ ಮುನ್ಸೂಚನೆ ಮತ್ತು ಸಿಡಿಲು ಮುನ್ನೆಚ್ಚರಿಕೆ ನೀಡಲು ಮೊಬೈಲ್ ಆ್ಯಪ್ ಅಭಿವೃದ್ಧಿ
- ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ವರ್ಷಾಶನ ಮಾಡಲು 20 ಕೋಟಿ
- ತಿರುಮಲದಲ್ಲಿ 20 ಕೋಟಿ ರೂ ವೆಚ್ಚದಲ್ಲಿ ಅತಿಥಿ ಗೃಹ ನಿರ್ಮಾಣ