ಸಾಲ ಮನ್ನಾ: ರೈತರು ತಿಳಿದಿರಬೇಕಾದ 7 ಅಂಶಗಳು
ಮೈತ್ರಿ ಸರ್ಕಾರದ ಮೊದಲನೇ ಬಜೆಟ್ ನ್ನು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗುರುವಾರ ಮಂಡಿಸಿದ್ದಾರೆ. ಬಹುಚರ್ಚೆಗೊಳಗಾಗಿದ್ದ ರೈತರ ಸಾಲ ಮನ್ನಾ ಬಗ್ಗೆ ಬಜೆಟ್ನಲ್ಲಿ ಏನು ಹೇಳಿದ್ದಾರೆ ನೋಡೋಣ:
- ಹಿಂದಿನ ಸರ್ಕಾರ ಸಹಕಾರಿ ಬ್ಯಾಂಕ್ಗಳಲ್ಲಿರುವ 8, 165 ಕೋಟಿ ರೂ. ರೈತರ ಸಾಲ ಮನ್ನಾ ಮಾಡಿತ್ತು. . ಅದರಲ್ಲಿ 4,165 ಕೋಟಿ ರೂ. ಹಿಂದಿನ ವರ್ಷವೇ ಬಿಡುಗಡೆ ಮಾಡಲಾಗಿತ್ತು. ಉಳಿದ 4 ಸಾವಿರ ಕೋಟಿ ರೂ.ಗಳನ್ನು ಪಾವತಿಸಲು ಈ ಬಜೆಟ್ ನಲ್ಲಿ ಅವಕಾಶ ಕಲ್ಪಿಸಲಾಗಿದೆ
- ಒಟ್ಟು 34 ಸಾವಿರ ಸಾವಿರ ಕೋಟಿ ರೂಪಾಯಿ ಸಾಲಮನ್ನಾ ಮಾಡಲು ನಿರ್ಧರಿಸಲಾಗಿದೆ. 2017 ಡಿಸೆಂಬರ್ 31 ರ ವರೆಗೆ ರೈತರು ಮಾಡಿದ 2 ಲಕ್ಷರೂಪಾಯಿವರೆಗಿನ ಎಲ್ಲ ಸುಸ್ತಿ ಬೆಳೆ ಸಾಲ ಒಂದೇ ಹಂತದಲ್ಲಿ ಮನ್ನಾವಾಗಲಿದೆ.
- ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದ ರೈತರಿಗೂ ಸಹ ಅನುಕೂಲ ಮಾಡಿಕೊಡಲು, ಸುಸ್ತಿದಾರರಲ್ಲದ ರೈತರ ಸಾಲ ಖಾತೆಗಳಿಗೆ ಉತ್ತೇಜನಕಾತರಿಯಾಗಿ ಪ್ರತಿ ಖಾತೆಗೆ ಅವರು ಮರು ಪಾವತಿ ಮಾಡಿರುವ ಸಾಲದ ಮೊತ್ತ ಅಥವಾ 25 ಸಾವಿರ ರೂ. [ಯಾವುದು ಕಡಿಮೆಯೋ] ಅದನ್ನು ತುಂಬಲು ನಿರ್ಧಾರ.
- ಸರ್ಕಾರಿ ಅಧಿಕಾರಿಗಳು, ಸಹಕಾರಿ ಕ್ಷೇತ್ರದ ಅಧಿಕಾರಿಗಳು ಹಾಗೂ ಕುಟುಂಬಸ್ಥರು, ಕಳೆದ 3 ವರ್ಷದಲ್ಲಿ ಆದಾಯ ತೆರಿಗೆ ಕಟ್ಟಿರುವ ರೈತರು, ಅನರ್ಹ ಕೃಷಿ ಸಾಲಗಾರರು ಸಾಲಮನ್ನಾ ಯೋಜನೆಯಿಂದ ಹೊರಗಿಡಲಾಗಿದೆ.
- ದೊಡ್ಡ ಭೂ ಹಿಡುವಳಿ ಹೊಂದಿರುವ ರೈತರ ಸಾಲಗಳು 40 ಲಕ್ಷ ಮೀರಿವೆ , ಹೆಚ್ಚಿನ ಮೊತ್ತದ ಬೆಳೆ ಸಾಲಮನ್ನಾ ಮಾಡುವುದು ಸರಿಯಾದ ಕ್ರಮವಲ್ಲ. ಈ ಹಿನ್ನೆಲೆಯಲ್ಲಿ ಸಾಲದ ಮೊತ್ತವನ್ನು ಪ್ರತಿ ರೈತ ಕುಟುಂಬಕ್ಕೆ 2 ಲಕ್ಷ ರೂ.ಗಳಿಗೆ ಮಿತಿಗೊಳಿಸಲು ನಿರ್ಧಾರ: ಸಿಎಂ ಕುಮಾರಸ್ವಾಮಿ
- ರೈತರಿಗೆ ಹೊಸ ಸಾಲ ಪಡೆಯಲು ಅನುಕೂಲವಾಗುವಂತೆ ಸರ್ಕಾರವು ಅವರ ಸುಸ್ತಿ ಖಾತೆಯಲ್ಲಿರುವ ಬಾಕಿಯನ್ನು ಮನ್ನಾ ಮಾಡಿ ಋಣಮುಕ್ತ ಪತ್ರವನ್ನು ನೀಡಲು ಕ್ರಮ
- ಈ ಉದ್ದೇಶಕ್ಕಾಗಿ 2018-19ರ ಬಜೆಟ್ ನಲ್ಲಿ 6500 ಕೋಟಿ ರೂ. ನಿಗದಿ