6ನೇ ವೇತನ ಆಯೋಗ ಏಪ್ರಿಲ್'ನಿಂದ ಜಾರಿಗೆ
ಈ ಆಯೋಗದ ಜಾರಿಯಿಂದ ಸರ್ಕಾರಕ್ಕೆ 10,508 ಕೋಟಿ ರೂಗಳ ಹೊರೆ ಬೀಳಲಿದೆ.
ಬೆಂಗಳೂರು(ಫೆ.16): ರಾಜ್ಯ ಸರ್ಕಾರವು ಸರ್ಕಾರಿ ನೌಕರರ 6ನೇ ವೇತನ ಆಯೋಗವನ್ನು ಏಪ್ರಿಲ್ 1 ರಿಂದ ಜಾರಿಗೊಳಿಸಲಿದೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ 5.93 ಲಕ್ಷ ನೌಕರರು ಹಾಗೂ 5.73 ಪಿಂಚಣಿದಾರರಿಗೆ ಅನುಕೂಲವಾಗುವ ಅವಧಿಯನ್ನು ಏಪ್ರಿಲ್ 30,2018ರವರೆಗೆ ವಿಸ್ತರಿಸಲಾಗಿದೆ. ಈ ಆಯೋಗದ ಜಾರಿಯಿಂದ ಸರ್ಕಾರಕ್ಕೆ 10,508 ಕೋಟಿ ರೂಗಳ ಹೊರೆ ಬೀಳಲಿದೆ.
ಕಳೆದ ವರ್ಷದ ಆಯವ್ಯಯದಲ್ಲಿ ಆಯೋಗ ರಚಿಸಲು ಶಿಫಾರಸ್ಸು ಮಾಡಿತ್ತು. ಶಿಫಾರಸ್ಸಿನ ವರದಿಯ ಆಧಾರದಂತೆ ನೌಕರರು ಹಾಗೂ ಪಿಂಚಣಿದಾರರು ಶೇ.30 ರಷ್ಟು ವೇತನ ಹೆಚ್ಚಳ ಪಡೆಯಲಿದ್ದಾರೆ' ಎಂದು ತಿಳಿಸಿದರು.