ಕರ್ನಾಟಕ ಬಜೆಟ್ 2018: ಕೈಗಾರಿಕಾ ಕ್ಷೇತ್ರಕ್ಕೆ ಸಿಕ್ಕಿದೆ ಬಂಪರ್ ಕೊಡುಗೆ
ಬೆಂಗಳೂರು (ಫೆ.16): ಸಿಎಂ ಸಿದ್ದರಾಮಯ್ಯ ಇಂದು ಮಂಡಿಸಿದ ರಾಜ್ಯ ಬಜೆಟ್’ನಲ್ಲಿ ಕೈಗಾರಿಕಾ ಕ್ಷೇತ್ರಕ್ಕೆ ಸಿಕ್ಕಿದ್ದಿಷ್ಟು.
ಬೆಂಗಳೂರು (ಫೆ.16): ಸಿಎಂ ಸಿದ್ದರಾಮಯ್ಯ ಇಂದು ಮಂಡಿಸಿದ ರಾಜ್ಯ ಬಜೆಟ್’ನಲ್ಲಿ ಕೈಗಾರಿಕಾ ಕ್ಷೇತ್ರಕ್ಕೆ ಸಿಕ್ಕಿದ್ದಿಷ್ಟು.
-ಸರಕು ಸಾಗಾಣಿಕೆ ಸೌಲಭ್ಯ ಸುಧಾರಿಸಕಲು ಲಾಗಿಸ್ಟಿಕ್ ನೀತಿ.
- ಬೆಂಗಳೂರು ಸಮೀಪ 400 ಎಕರೆ, ಹುಬ್ಬಳಿಯಲ್ಲಿ 50 ಎಕರೆ ಲಾಗಿಸ್ಟಿಕ್ ಪಾರ್ಕ್ ನಿರ್ಮಾಣ.
- ಕೈಗಾರಿಕೆಗಳ ಸ್ಥಾಪನೆಗೆ ಕಾರ್ಮಿಕ ಸಾಂದ್ರತೆಯ ಉದ್ಯಮಗಳ ನೀತಿ ಜಾರಿ.
- ಅಸಲಿ ಆಸ್ತಿ ತೆರಿಗೆ ಇದೇ ಸೆಪ್ಟೆಂಬರ್ ಒಳಗೆ ಪಾವತಿಸಿದ್ರೆ ಸ್ಥಳಿಯ ಸಂಸ್ಥೆಗಳು ವಿಧಿಸಿದ ದಂಡ ಮನ್ನಾ.
- ಉತ್ಪಾದನೋದ್ಯಮ ಉತ್ತೇಜಿಸಲು ಇನೋವೇಶನ್ ಪಾಲಿಸಿ .
- 23 ಕೋಟಿ ವೆಚ್ಚದಲ್ಲಿ ಕಲಿಕಾ ಶ್ರೇಷ್ಠತಾ ಕೇಂದ್ರ ಸ್ಥಾಪನೆ.
-ಗ್ರಾಮೀಣರಿಗೆ ಉದ್ಯೋಗಾವಕಾಶ ಕಲ್ಪಿಸಲು 30ಎಕರೆ ಬಂಜರು ಭೂಮಿ ಉದ್ಯಮ ವಲಯ ಎಂದು ಘೋಷಣೆ.
- ರಾಜ್ಯ ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮಕ್ಕೆ 5 ಕೋಟಿ ಬಿಡುಗಡೆ.
- ಸಣ್ಣ ಮತ್ತು ಮದ್ಯಮ ಕೈಗಾರಿಕೆಯ ಅಭಿವೃದ್ಧಿಗೆ 11 ಹೊಸ ಕೈಗಾರಿಕಾ ವಸಹಾತು ನಿರ್ಮಾಣ.
- ಬೆಳಗಾವಿಯಲ್ಲಿ ಸಕ್ಕರೆ ತಂತ್ರಜ್ಞಾನ ಕೋರ್ಸ್ ಆರಂಭಕ್ಕೆ ಚಿಂತನೆ.
- ಕಬ್ಬು ಬೆಳೆಗಾರರಿಗೆ ಉತ್ತೇಜನ ನೀಡಲು ಹೊಸ ಕಬ್ಬು ತಳಿ ಅಭಿವೃದ್ಧಿ.
-ಕಬ್ಬು ಬೆಳೆಗಾರರಿಗೆ ಉತ್ತೇಜನಕ್ಕಗಿ 5 ಕೋಟಿವರೆಗೆ ಸಹಾಯಧನ.