Asianet Suvarna News Asianet Suvarna News

ಜಿಂದಾಲ್ ಗೆ ಭೂಮಿ, HDKಗೆ ಹೊಸ ಸಲಹೆ ಕೊಟ್ಟ BSY

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಜನಪ್ರತಿನಿಧಿಗಳಿಗೆ ಕಿವಿಮಾತು ಹೇಳಿದ್ದಾರೆ. ರಾಜ್ಯದ ಜನತೆ ನೀಡಿರುವ ಜವಾಬ್ದಾರಿಯನ್ನು ಹೇಗೆ ನಿರ್ವಹಿಸುತ್ತೇವೆ ಎನ್ನುವುದರ ಮೇಲೆ ನಮ್ಮೆಲ್ಲರ ಭವಿಷ್ಯ ನಿಂತಿದೆ ಎಂದಿದ್ದಾರೆ.

Karnataka BJP President BS Yeddyurappa Slams CM HD Kumaraswamy
Author
Bengaluru, First Published Jun 5, 2019, 4:53 PM IST

ಬೆಂಗಳೂರು[ಜೂ. 05]  ರಾಜ್ಯದ ಜನತೆ ನಮಗೆ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ನಾವು ಹೇಗೆ ಆ ಜವಾಬ್ದಾರಿ ನಿರ್ವಹಿಸುತ್ತೇವೆ ಎನ್ನುವುದರ ಮೇಲೆ ನಮ್ಮ ಭವಿಷ್ಯ ನಿಂತಿದೆ. 25 ಸಂಸದರು ರಾಜ್ಯದ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ನೂತನ ಸಂಸದರಿಗೆ ತಿಳಿಸಿದ್ದಾರೆ.

ರಾಜ್ಯದಲ್ಲಿ ಈ ಸರ್ಕಾರ ಇದ್ದು ಸತ್ತಂತೆ ಆಗಿದೆ. ವಿಧಾನಸೌಧ ಖಾಲಿ ಆಗಿದೆ. ಗ್ರಾಮ ವಾಸ್ತವ್ಯ ಮಾಡ್ತೇನೆ ಅಂತ ಕುಮಾರಸ್ವಾಮಿ ಹೊಸ ನಾಟಕ ಶುರುಮಾಡಿದ್ದಾರೆ. ಈ ಹಿಂದೆ ಗ್ರಾಮ ವಾಸ್ತವ್ಯ ಮಾಡಿದ್ದ ಗ್ರಾಮ ಹೇಗಿದೆಯೋ ಗೊತ್ತಿಲ್ಲ. ಈಗ ಶಾಲಾ ವಾಸ್ತವ್ಯ ಮಾಡಲು ಹೊರಟಿದ್ದಾರೆ. ಭೀಕರ ಬರಗಾಲ ಇದೆ, ಸಚಿವರು ಆ ಕ್ಷೇತ್ರಗಳಿಗೆ ಹೋಗ್ತಾ ಇಲ್ಲ ಎಂದು ಸರಕಾರ ಮತ್ತು ಕುಮಾರಸ್ವಾಮಿ ಮೇಲೆ ವಾಗ್ದಾಳಿ ಮಾಡಿದರು. 

ಬಿಜೆಪಿ ಅಭ್ಯರ್ಥಿಗಳು ಗೆದ್ದು ಬಂದ ಕಾರಣ ಹೇಳಿದ ಈಶ್ವರಪ್ಪ

ಜಿಂದಾಲ್ ಗೆ ಭೂಮಿ ನೀಡುವುದನ್ನು ಖಂಡಿಸುತ್ತೇನೆ. ಈ ಬಗ್ಗೆ ಹೋರಾಟ ಮಾಡುತ್ತೇವೆ. ಜಿಂದಾಲ್ ಗೆ ಲೀಸ್ ಗೆ ಬೇಕಾದರೆ ನೀಡಲಿ ಅದನ್ನು ಬಿಟ್ಟು ಮಾರಾಟ ಮಾಡಲು ಬಿಡಲ್ಲ ಎಂದು ಬಿಎಸ್ ವೈ ಗುಡುಗಿದರು.

Follow Us:
Download App:
  • android
  • ios