11 ಕ್ಷೇತ್ರಗಳ ಟಿಕೆಟ್ ಉಳಿಸಿಕೊಂಡ ಬಿಜೆಪಿ
3 ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿಯು 213 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನೂ 11 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದೆ.ಬಾದಾಮಿ, ಭದ್ರಾವತಿ, ಶಿಡ್ಲಘಟ್ಟ, ಯಶವಂತಪುರ, ಬಿಟಿಎಂ ಲೇಔಟ್, ರಾಮನಗರ, ಕನಕಪುರ, ಬೇಲೂರು, ಹಾಸನ, ಸಕಲೇಶಪುರ ಹಾಗೂ ವರಣಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಬೇಕಿದೆ.
ಬೆಂಗಳೂರು: 3 ಹಂತಗಳಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವ ಬಿಜೆಪಿಯು 213 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಇನ್ನೂ 11 ಕ್ಷೇತ್ರಗಳನ್ನು ಬಾಕಿ ಉಳಿಸಿಕೊಂಡಿದೆ.
ಬಾದಾಮಿ, ಭದ್ರಾವತಿ, ಶಿಡ್ಲಘಟ್ಟ, ಯಶವಂತಪುರ, ಬಿಟಿಎಂ ಲೇಔಟ್, ರಾಮನಗರ, ಕನಕಪುರ, ಬೇಲೂರು, ಹಾಸನ, ಸಕಲೇಶಪುರ ಹಾಗೂ ವರಣಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಣಕ್ಕಿಳಿಯುವ ಸಾಧ್ಯತೆ ಇರುವುದರಿಂದ ಬಾದಾಮಿಗೆ
ಯಾರನ್ನು ಕಣಕ್ಕಿಳಿಸಿದರೆ ಸೂಕ್ತ ಎಂಬ ಪರಿಶೀಲನೆ ಬಿಜೆಪಿಯಲ್ಲಿ ನಡೆದಿದೆ. ಯಶವಂತಪುರ ಕ್ಷೇತ್ರದಿಂದ ಸಂಸದೆ ಶೋಭಾ ಕರಂದ್ಲಾಜೆ ಅವರನ್ನು ಕಣಕ್ಕಿಳಿಸುವ ಸಂಬಂಧ ಪಕ್ಷದಲ್ಲಿ ತೆರೆಮರೆಯಲ್ಲಿ ತೀವ್ರ ಪ್ರಯತ್ನ ನಡೆಯುತ್ತಿದೆ.
ಹೀಗಾಗಿ, ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ವರುಣಾದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಟಿಕೆಟ್ ಎನ್ನಲಾಗು ತ್ತಿದ್ದರೂ ಕೊನೆಯ ಹಂತದಲ್ಲಿ ನೀಡುವ ಸಾಧ್ಯತೆಯಿದೆ.