Asianet Suvarna News Asianet Suvarna News

ಕನ್ನಡಪ್ರಭ ಫಲಶ್ರುತಿ : ಶಿಕ್ಷಕರ ವೇತನ ಪಾವತಿಗೆ ಸಿಎಂ ಸೂಚನೆ

ಕನ್ನಡ ಪ್ರಭ ವರದಿಗೆ ಸ್ಪಂದಿಸಿದ ಸಿಎಂ ಕುಮಾರಸ್ವಾಮಿ 12 ಸಾವಿರ ಶಿಕ್ಷಕರ ಬಾಕಿ ವೇತನ ಪಾವತಿಸುವಂತೆ ಸೂಚನೆ ನೀಡಿದ್ದಾರೆ. 

Kannadaprabha Impact  Teachers To Get Due Salaries
Author
Bengaluru, First Published Sep 6, 2018, 9:32 AM IST

ಬೆಂಗಳೂರು: ರಾಜ್ಯದ 12000 ಕ್ಕೂ ಹೆಚ್ಚು ಶಾಲಾ ಶಿಕ್ಷಕರಿಗೆ 6 ತಿಂಗಳಿನಿಂದ ವೇತನ ಪಾವತಿಯಾಗದ ಸಮಸ್ಯೆಗೆ ಮುಖ್ಯ ಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಂದಿಸಿದ್ದಾರೆ. 

‘ರಾಜ್ಯದ 12 ಸಾವಿರ ಶಿಕ್ಷಕರಿಗೆ 6 ತಿಂಗಳಿನಿಂದ ವೇತನ ಇಲ್ಲ’ ಎಂಬ ಶೀರ್ಷಿಕೆಯಡಿ ‘ಕನ್ನಡಪ್ರಭ’ ವರದಿ ಪ್ರಕಟಿಸಿರುವುದನ್ನು ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಭಾಷಣಕ್ಕೂ ಮುನ್ನ ವೇದಿಕೆಯಲ್ಲಿ ಕುಳಿತು ಓದಿ ತಿಳಿದುಕೊಂಡ ಮುಖ್ಯಮಂತ್ರಿ ಗಳು, ಸ್ಥಳದಲ್ಲಿಯೇ ಫೋನಾಯಿಸಿದರು. 

ಹಣಕಾಸು ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದೇನೆ. ಈ ಯೋಜನೆಗೆ ಕೇಂದ್ರ ಅನುದಾನ ನೀಡಿಲ್ಲ ಎಂದು ಅಧಿಕಾರಿಗಳು ಹೇಳು ತ್ತಿದ್ದಾರೆ. ಆದರೂ, ಶಿಕ್ಷಕರಿಗೆ ಕೂಡಲೇ ವೇತನ ನೀಡುವಂತೆ ಹಣಕಾಸು, ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

Follow Us:
Download App:
  • android
  • ios