4 ಲಕ್ಷ ಕ್ಯಾಶ್, ಕಾರು ಸಮೇತ ಕನ್ನಡ ಸಂಘಟನೆ ಉಪಾಧ್ಯಕ್ಷ ಎಸ್ಕೇಪ್!
- ಕನ್ನಡ ಸಂಘಟನೆ ಉಪಾಧ್ಯಕ್ಷನಿಂದ ಉದ್ಯಮಿಗೆ ದೋಖಾ
-ಸ್ನೇಹಿತನಿಗೇ ಮೋಸ ಮಾಡಿದ ಕನ್ನಡ ಸಂಘಟನೆ ಉಪಾಧ್ಯಕ್ಷ
- 4 ಲಕ್ಷ ಕ್ಯಾಶ್ ಹಾಗೂ ಕಾರ್ ಜೊತೆ ಎಸ್ಕೇಪ್
ಬೆಂಗಳೂರು (ಆ. 10): ಸಿಗರೇಟ್ ತರಲು ಹೇಳಿ ಕ್ಯಾಶ್ ಹಾಗೂ ಕಾರು ಸಮೇತ ಕನ್ನಡ ಸಂಘಟನೆ ಉಪಾಧ್ಯಕ್ಷ ಎಸ್ಕೇಪ್ ಆಗಿದ್ದಾರೆ. ಜನನಿಭೂಮಿ ಬೆಂಗಳೂರು ಉಪಾಧ್ಯಕ್ಷ ಗೋಪಿ ಗೊರಗುಂಟೆಪಾಳ್ಯದ ಉದ್ಯಮಿ ಕುಮಾರ್ ಗೆ ದೋಖಾ ಎಸಗಿದ್ದಾರೆ.
ಸಂಬಂಧಿಗಳೊಬ್ಬರು ಆಸ್ಪತ್ರೆಯಲ್ಲಿದ್ದಾರೆಂದು ಕುಮಾರ್ ಪಾಂಡವಪುರ ಡಿಸಿಸಿ ಬ್ಯಾಂಕಿನಿಂದ 4 ಲಕ್ಷ ಹಣ ಡ್ರಾ ಮಾಡಿದ್ದರು. ಈ ವೇಳೆ ಗೋಪಿ ಹಾಗೂ ಇನ್ನೊಬ್ಬ ಸ್ನೇಹಿತ ಕುಮಾರ್ ಜೊತೆಗಿದ್ದರು. ಬೆಂಗಳೂರಿಗೆ ಬಂದು ಮೊದಲು ಒಬ್ಬ ಸ್ನೇಹಿತನನ್ನ ಡ್ರಾಪ್ ಮಾಡಿದ ಕುಮಾರ್ ನಂತರ ಗೋಪಿಯನ್ನ ಡ್ರಾಪ್ ಮಾಡಲು ತೆರಳುತ್ತಿದ್ದರು. ಈ ವೇಳೆ ಚಿಕ್ಕಜಾಲ ಬಳಿ ಸಿಗರೇಟ್ ತರಲು ಗೋಪಿ ಹೇಳಿದ್ದರು. ಆಗ ಕಾರ್ ನಿಂದ ಇಳಿದು ಹೋಗಿದ್ದಾರೆ ಕುಮಾರ್. ಈ ವೇಳೆ ಕಾರು ಹಾಗೂ 4 ಲಕ್ಷ ಕ್ಯಾಶ್ ಜೊತೆ ಪರಾರಿಯಾಗಿದ್ದಾರೆ ಗೋಪಿ.
ಬಗಲಗುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.