ಸಿಂಗಾಪುರ ಏರ್‌ಲೈನ್ಸ್‌ನಲ್ಲಿ ಊಟದ ಮೆನು, ಪ್ರಕಟಣೆಗಳು ಕನ್ನಡದಲ್ಲಿ ರಾಜಕೀಯ ತಿರುವು ಪಡೆದುಕೊಂಡ ಪ್ರಧಾನ ಕಾರ್ಯದರ್ಶಿ ಟ್ವೀಟ್ ಕೇಂದ್ರ ಸರ್ಕಾರದ  ಹಿಂದಿ ಹೇರಿಕೆ ನೀತಿ ಟೀಕಿಸಿದ ಸಿದ್ದರಾಮಯ್ಯ  

ಬೆಂಗಳೂರು (ಮೇ. 01): ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ. ಅತೀಕ್, ಕನ್ನಡದ ಬಗ್ಗೆ ಮಾಡಿರುವ ಟ್ವೀಟ್ ಇದೀಗ ’ಹಿಂದಿ ಹೇರಿಕೆ’ಯ ರಾಜಕೀಯ ತಿರುವನ್ನು ಪಡೆದುಕೊಂಡಿದೆ.

ಸಿಂಗಾಪುರದಿಂದ ಬೆಂಗಳೂರಿಗೆ ಪ್ರಯಾಣಿಸುವ ಸಿಂಗಾಪುರ ಏರ್‌ಲೈನ್ಸ್ [ವಿಮಾನ ಸಂಖ್ಯೆ- SQ502] ನಲ್ಲಿ ಊಟದ ಮೆನು ಹಾಗೂ ಪ್ರಕಟಣೆಗಳನ್ನು ನಿರರ್ಗಳವಾಗಿ ಕನ್ನಡದಲ್ಲಿ ಮಾಡಲಾಗುತ್ತದೆ. ಬೆಂಗಳೂರಿಗೆ ಬರುವ ಹಾಗೂ ಇಲ್ಲಿಂದ ಹೊರಡುವ ವಿಮಾನಗಳಲ್ಲಿ ಈ ವ್ಯವಸ್ಥೆಯೇಕೆ ಸಾಧ್ಯವಿಲ್ಲ? ಇದು ಬಹಳ ಕಷ್ಟವಾದುದೇನಲ್ಲ.. ಎಂದು ಟ್ವೀಟಿಸಿದ್ದರು. 

Scroll to load tweet…

ಅದಕ್ಕೆ ಪ್ರತಿಕ್ರಿಯಿಸುತ್ತಾ ರೀಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಇದು ವಿಮಾನಯಾನ ಸಂಸ್ಥೆಗಳ ಸಾಮರ್ಥ್ಯಕ್ಕಿಂತ ಹೆಚ್ಚಾಗಿ, ಕೇಂದ್ರ ವಿಮಾನಯಾನ ಸಚಿವಾಲಯದ ಹಿಂದಿ ಹೇರಿಕೆಗೆ ಸಂಬಂಧಪಟ್ಟ ವಿಚಾರವಾಗಿದೆ ಎಂದು ಹೇಳಿದ್ದಾರೆ.

Scroll to load tweet…

ಈ ಚರ್ಚೆಯಲ್ಲಿ ಪಾಲ್ಗೊಂಡ ಇತರ ಟ್ವಿಟರಿಗರು ಕೂಡಾ ವಿಮಾನಯಾನ ಸಂಸ್ಥೆಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

Scroll to load tweet…
Scroll to load tweet…
Scroll to load tweet…
Scroll to load tweet…