Asianet Suvarna News Asianet Suvarna News

ಆಸ್ಪತ್ರೆ ಸೇರಿದ ಕಾಂಗ್ರೆಸ್ ಶಾಸಕ : ವಿಶ್ವಾಸಮತಕ್ಕೆ ಗೈರು

ಕಾಂಗ್ರೆಸ್ ಶಾಸಕರೋರ್ವರು ಅನಾರೋಗ್ಯದಿಂದ ಆಸ್ಪತ್ರೆಗೆ ಸೇರಿದ್ದು, ವಿಶ್ವಾಸ ಮತದ ವೇಳೆ ಸದನಕ್ಕೆ ಗೈರಾಗಿದ್ದಾರೆ. ಈ ಮೂಲಕ ಮೈತ್ರಿ ಪಾಳಯದ ಬಲ ಇನ್ನಷ್ಟು ಕಡಿಮೆಯಾದಂತಾಗಿದೆ. 

Kagawad Congress MLA Srimanta Patil Hospitalised
Author
Bengaluru, First Published Jul 18, 2019, 12:59 PM IST

ಬೆಂಗಳೂರು[ಜು.18] : ಈಗಾಗಲೇ ಅತೃಪ್ತರಾಗಿ ಹಲವು ಮುಂಬೈ ಸೇರಿರುವ ಶಾಸಕರ ಜೊತೆಗೆ ಮತ್ತೋರ್ವ ಕಾಂಗ್ರೆಸ್ ಶಾಸಕ ಕೂಡ ಸದನಕ್ಕೆ ಗೈರಾಗಿದ್ದಾರೆ.ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಶ್ರೀಮಂತ ಪಾಟೀಲ್ ಸ್ಪೀಕರ್ ಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. 

"

ಕರ್ನಾಟಕ ರಾಜಕೀಯದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆಸ್ಪತ್ರೆಯಲ್ಲಿ ಇಸಿಜಿ ಮಾಡಿಸಿಕೊಳ್ಳುತ್ತಿರುವ ಫೋಟೋ ಕಳುಹಿಸಿದ್ದು, ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿ, ಈ ನಿಟ್ಟಿನಲ್ಲಿ ತಮಗೆ ಸದನಕ್ಕೆ ಹಾಜರಾಗಲು ಆಗುತ್ತಿಲ್ಲ ಎಂದು ತಿಳಿಸಿದ್ದಾರೆ. 

ಬುಧವಾರವಷ್ಟೇ ರೆಸಾರ್ಟ್ ನಿಂದ ಕಣ್ ತಪ್ಪಿಸಿ ತೆರಳಿದ್ದ ಶಾಸಕ ಇದೀಗ ಆಸ್ಪತ್ರೆಯಲ್ಲಿದ್ದು, ಇದರಿಂದ ಅತೃಪ್ತರೊಂದಿಗೆ ಮತ್ತೋರ್ವ ಕೈ ಶಾಸಕ ಗೈರಾಗುವ ಮೂಲಕ ಮೈತ್ರಿ ಪಾಳಯದ ಬಲ ಇನ್ನಷ್ಟು ಕುಸಿಯುವಂತೆ ಮಾಡಿದೆ.

Follow Us:
Download App:
  • android
  • ios