ಮತದಾನ ಜಾಗೃತಿಗೆ ಸ್ಪೈಡರ್ ಮ್ಯಾನ್ ಜ್ಯೋತಿರಾಜ್ ನೇಮಕ
ಚಿತ್ರದುರ್ಗದ ಜಿಲ್ಲಾ ಐಕಾನ್ ಆಗಿ ಜ್ಯೋತಿರಾಜ್ ಆಯ್ಕೆಯಾಗಿದ್ದಾರೆ.
ಚಿತ್ರದುರ್ಗ : ಈಗಾಗಲೇ ಕರ್ನಾಟಕದಲ್ಲಿ ಚುನಾವಣಾ ದಿನಾಂಕ ನಿಗದಿಯಾಗಿದೆ. ಮೇ 12ರಂದು ಕರ್ನಾಟಕ ಚುನಾವಣೆ ನಡೆಯಲಿದ್ದು, ಮತದಾನ ಜಾಗೃತಿಗಾಗಿ ಕೋತಿರಾಜ್ ಅಲಿಯಾಸ್ ಜ್ಯೋತಿರಾಜ್’ನನ್ನು ಆಯ್ಕೆ ಮಾಡಲಾಗಿದೆ.
ಚಿತ್ರದುರ್ಗದ ಜಿಲ್ಲಾ ಐಕಾನ್ ಆಗಿ ಜ್ಯೋತಿರಾಜ್ ಆಯ್ಕೆಯಾಗಿದ್ದಾರೆ.
ಭಾರತದ ಸ್ಪೈಡರ್ ಮ್ಯಾನ್ ಎಂದೇ ಖ್ಯಾತರಾದ ಅವರಿಗೆ ಇದೀಗ ಹೊಸ ಅವಕಾಶವೊಂದು ಒಲಿದು ಬಂದಿದೆ. ಚಿತ್ರದುರ್ಗದ ಜಿಲ್ಲಾಧಿಕಾರಿ ವಿವಿ. ಜ್ಯೋತ್ಸ್ನಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.