10 ಸಾವಿರ ರೂಪಾಯಿ ಶ್ಯೂರಿಟಿ, ಮತ್ತು 25 ಸಾವಿರ ಬಾಂಡ್ ಪಡೆದು ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ಮುಂದೂಡಿದೆ

ಹುಬ್ಬಳ್ಳಿ(ಅ.01): ಮಾನನಷ್ಟ ಮೊಕದ್ದಮೆ ಆರೋಪದಡಿ ಬಂಧನವಾಗಿದ್ದ ಪತ್ರಕರ್ತೆ ಗೌರಿ ಲಂಕೇಶ್‌ಗೆ ಜಾಮೀನು ಮಂಜೂರಾಗಿದೆ. ಹುಬ್ಬಳ್ಳಿಯ ಎರಡನೇ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಗೌರಿ ಅವರನ್ನು ಹಾಜರುಪಡಿಸಲಾಗಿತ್ತು. ವಿಚಾರಣೆ ನಡೆಸಿದ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ.

Add Asianetnews Kannada as a Preferred SourcegooglePreferred

10 ಸಾವಿರ ರೂಪಾಯಿ ಶ್ಯೂರಿಟಿ, ಮತ್ತು 25 ಸಾವಿರ ಬಾಂಡ್ ಪಡೆದು ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ಮುಂದೂಡಿದೆ. 2007ರಲ್ಲಿ `ದರೋಡೆಗಿಳಿದ ಬಿಜೆಪಿಗಳು' ಎಂಬ ತಲೆ ಬರಹದಡಿಯಲ್ಲಿ ಸಂಸದ ಪ್ರಹ್ಲಾದ್ ಜೋಷಿ ಅವರ ಕುರಿತು ಪತ್ರಕರ್ತೆ ಗೌರಿ ಲಂಕೇಶ್ ಲೇಖನವೊಂದು ಪ್ರಕಟಿಸಿದ್ದರು. ಈ ಸಂಬಂಧ ಗೌರಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು. ಆದರೆ, ಇದರ ವಿಚಾರಣೆಗೆ ಗೌರಿ ಎರಡು ಬಾರಿ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ, ಬಂಧನ ವಾರೆಂಟ್ ಜಾರಿಯಾಗಿತ್ತು. ಇಂದು ವಿಚಾರಣೆ ನಡೆಸಿದ ಕೋರ್ಟ್ ಖುದ್ದು ಹಾಜರಾಗುವಂತೆ ಸಂಸದ ಪ್ರಹ್ಲಾದ್ ಜೋಷಿ ಅವರಿಗೂ ಸೂಚನೆ ನೀಡಿದೆ.