ಈಗಲೂ ನಾವು ಜೆಡಿಎಸ್ನಲ್ಲೇ ಇದ್ದೇವೆ. ಆದರೆ ಜೆಡಿಎಸ್ ಬೇಡ ಅಂದರೆ ನಾವೇನು ಮಾಡೋದು.
ಬೆಂಗಳೂರು(ಡಿ.24): ನಾವೇನು ತಪ್ಪು ಮಾಡಿಲ್ಲ, ನಾವು ಪಕ್ಷದಲ್ಲಿ ಯಾರಿಗೂ ಬೇಡವಾಗಿದ್ದೇವೆ ಹೀಗಾಗಿ ಪಕ್ಷವನ್ನು ತ್ಯಜಿಸುವುದಾಗಿ ಜೆಡಿಎಸ್ ಬಂಡಾಯ ಮುಖಂಡರಾದ ಜಮೀರ್ ಅಹ್ಮದ್ ಖಾನ್ ಬಾಂಬ್ ಸಿಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಈಗಲೂ ನಾವು ಜೆಡಿಎಸ್ನಲ್ಲೇ ಇದ್ದೇವೆ. ಆದರೆ ಜೆಡಿಎಸ್ ಬೇಡ ಅಂದರೆ ನಾವೇನು ಮಾಡೋದು. ಜನವರಿ 8ರಂದು ಶರದ್ ಪವಾರ್ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಅಂತ ಹೇಳಿದ್ದಾರೆ
Add Asianetnews Kannada as a Preferred Source

