Asianet Suvarna News Asianet Suvarna News

ಅಧಿಕಾರ ಕೊಡಬೇಡಿ ಎಂದು ಬಸ್ ಎದುರು ಮಲಗಿದ್ದ ಜಮೀರ್

ಜಮೀರ್ ಅಹಮದ್ ಹಾಗೂ ಜೆಡಿಎಸ್ ಮುಖಂಡರ ನಡುವೆ ಮಾತಿನ ಸಮರ ನಡೆದಿದೆ. ಬಿಜೆಪಿ ಜೆಡಿಎಸ್ ಸರ್ಕಾರದ ಅವಧಿಯ ವಿಚಾರವಾಗಿ ಮುಖಂಡರು ವಾದ ನಡೆದಿದೆ.

JDS Leader Basavaraj Horatti Allegation Against Zameer Ahmed Over Political Issue
Author
Bengaluru, First Published May 13, 2019, 10:54 AM IST

ಹುಬ್ಬಳ್ಳಿ: ಬಿಜೆಪಿ- ಜೆಡಿಎಸ್ ಮೈತ್ರಿ ಸರ್ಕಾರದ ಸಂದರ್ಭದಲ್ಲಿ ತಾನು ಅಧಿಕಾರ ಬಿಟ್ಟು ಕೊಡುವಂತೆ ಕೇಳಿಕೊಂಡಿದ್ದರೂ ಮುಖ್ಯ ಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅಧಿಕಾರ ಬಿಟ್ಟುಕೊಡದೆ ತಪ್ಪು ಮಾಡಿದ್ದರು ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ. 

ಈ ಹೇಳಿಕೆಗೆ ತಿರುಗೇಟು ನೀಡಿರುವ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ, ಬಿಜೆಪಿಗೆ ಜೆಡಿಎಸ್ ಅಧಿಕಾರ ಬಿಟ್ಟು ಕೊಡದಿರಲು ಸಚಿವ ಜಮೀರ್ ಅಹ್ಮದ್ ಅವರೇ ಕಾರಣ. ಅಂದು ಅವರು ಬಸ್ ಎದುರು ಮಲಗಿ ಪ್ರತಿಭಟಿಸಿದ್ದರು ಎಂದು ಆರೋಪಿಸಿದ್ದಾರೆ. 

ಹುಬ್ಬಳ್ಳಿಯಲ್ಲಿ ಈ ಇಬ್ಬರೂ ನಾಯಕರು ಹೇಳಿಕೆ, ಪ್ರತಿ ಹೇಳಿಕೆ ನೀಡಿದ್ದಾರೆ.

Follow Us:
Download App:
  • android
  • ios