ಅಧಿಕಾರ ಕೊಡಬೇಡಿ ಎಂದು ಬಸ್ ಎದುರು ಮಲಗಿದ್ದ ಜಮೀರ್
ಜಮೀರ್ ಅಹಮದ್ ಹಾಗೂ ಜೆಡಿಎಸ್ ಮುಖಂಡರ ನಡುವೆ ಮಾತಿನ ಸಮರ ನಡೆದಿದೆ. ಬಿಜೆಪಿ ಜೆಡಿಎಸ್ ಸರ್ಕಾರದ ಅವಧಿಯ ವಿಚಾರವಾಗಿ ಮುಖಂಡರು ವಾದ ನಡೆದಿದೆ.
ಹುಬ್ಬಳ್ಳಿ: ಬಿಜೆಪಿ- ಜೆಡಿಎಸ್ ಮೈತ್ರಿ ಸರ್ಕಾರದ ಸಂದರ್ಭದಲ್ಲಿ ತಾನು ಅಧಿಕಾರ ಬಿಟ್ಟು ಕೊಡುವಂತೆ ಕೇಳಿಕೊಂಡಿದ್ದರೂ ಮುಖ್ಯ ಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಅಧಿಕಾರ ಬಿಟ್ಟುಕೊಡದೆ ತಪ್ಪು ಮಾಡಿದ್ದರು ಎಂದು ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.
ಈ ಹೇಳಿಕೆಗೆ ತಿರುಗೇಟು ನೀಡಿರುವ ಜೆಡಿಎಸ್ ಮುಖಂಡ ಬಸವರಾಜ ಹೊರಟ್ಟಿ, ಬಿಜೆಪಿಗೆ ಜೆಡಿಎಸ್ ಅಧಿಕಾರ ಬಿಟ್ಟು ಕೊಡದಿರಲು ಸಚಿವ ಜಮೀರ್ ಅಹ್ಮದ್ ಅವರೇ ಕಾರಣ. ಅಂದು ಅವರು ಬಸ್ ಎದುರು ಮಲಗಿ ಪ್ರತಿಭಟಿಸಿದ್ದರು ಎಂದು ಆರೋಪಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಈ ಇಬ್ಬರೂ ನಾಯಕರು ಹೇಳಿಕೆ, ಪ್ರತಿ ಹೇಳಿಕೆ ನೀಡಿದ್ದಾರೆ.