ಬೆಂಗಳೂರು(ಸೆ.09): ಕಾವೇರಿಗಾಗಿ ಕರ್ನಾಟಕದಾದ್ಯಂತ ಪ್ರತಿಭಟನೆಯ ಕಾವು ಹೆಚ್ಚಾಗುತ್ತಿದೆ. ರಾಜ್ಯ ಹೊತ್ತಿ ಉರಿಯುತ್ತಿದೆ. ಆದರೆ ತಮಿಳುನಾಡು ಮಾತ್ರ ಮತ್ತೆ ನೀರು ಬೇಕೆಂದು ಕ್ಯಾತೆ ತೆಗೆದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗ ಬಿಟ್ಟಿರುವ 13 ಟಿಎಂಸಿ ನೀರು ಸಾಲೋದಿಲ್ಲ, ಬಾಕಿ ಉಳಿದಿರುವ 61 ಟಿಎಂಸಿ ನೀರು ಬೇಕೆಂದು ತಮಿಳುನಾಡು ಮುಖ್ಯಕಾರ್ಯದರ್ಶಿಯಿಂದ ಇ ಮೇಲ್ ಮೂಲಕ ಕಾವೇರಿ ಮೇಲುಸ್ತುವಾರಿ ಸಮಿತಿಗೆ ಜಯಲಲಿತಾ ಅರ್ಜಿ ಸಲ್ಲಿಸಿದ್ದಾರೆ. ಇದು ಸೆ.12ಕ್ಕೆ ನಡೆಯಲಿರುವ ಮೇಲುಸ್ತುವಾರಿ ಸಮಿತಿ ಸಭೆಗೆ ಒತ್ತಡ ತರುವ ತಂತ್ರವಾಗಿದೆ. ಇವರ ಈ ಬೇಡಿಕೆಯಿಂದ ಕರ್ನಾಟಕ ಇನ್ನಷ್ಟು ಸಂಕಷ್ಟಕ್ಕೆ ತುತ್ತಾಗಲಿದೆ.