ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿ ಹಾಗೂ ಸಂಸದ ಶ್ರೀರಾಮುಲು ಇಂದು ಇರುಮಿಡಿ ಹೊತ್ತು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿದ್ದಾರೆ. 

ಬೆಂಗಳೂರು (ಜೂ.15): ಮಾಜಿ ಸಚಿವ ಗಾಲಿ ಜನಾರ್ಧನ್ ರೆಡ್ಡಿ ಹಾಗೂ ಸಂಸದ ಶ್ರೀರಾಮುಲು ಇಂದು ಇರುಮಿಡಿ ಹೊತ್ತು ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತೆರಳಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

85 ಜನ ಬೆಂಬಲಿಗರೊಂದಿಗೆ ವಿಶೇಷ ವಿಮಾನದಲ್ಲಿ ತೆರಳಿದ ರೆಡ್ಡಿ, ಶ್ರೀರಾಮುಲು ಶಬರಿಮಲೈಗೆ ತೆರಳಿದ್ದಾರೆ. ಕಳೆದ 5 ವರ್ಷಗಳಿಂದ ಇರುಮುಡಿ ಸೇವೆ ಮಾಡುತ್ತಿರುವ ಶ್ರೀರಾಮುಲು, ಈ ಬಾರಿ ಜನಾರ್ಧನ್ ರೆಡ್ಡಿ ಅಯ್ಯಪ್ಪಸ್ವಾಮಿ ಬೆಟ್ಟ ಹತ್ತಲಿದ್ದಾರೆ. ನಾಳೆ ಬೆಳಗ್ಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಕಳೆದ 5 ವರ್ಷಗಳಿಂದ ಇರುಮುಡಿ ಸೇವೆ ಮಾಡಿದ್ದ ಶ್ರೀರಾಮುಲು ಸ್ನೇಹಿತ ಜನಾರ್ಧನ ರೆಡ್ಡಿ ಅವ್ರಿಗೂ ಇರುಮುಡಿ ಸೇವೆ ಮಾಡಲು ಸಲಹೆ ನೀಡಿದ್ದಾರೆ. ಇದೇ ವೇಳೆ ಜನರ ಒಳಿತಿಗಾಗಿ ನಾನು ಪ್ರತಿವರ್ಷ ಇರಮುಡಿ ಹೊತ್ತು ಅಯ್ಯಪ್ಪನ ದರ್ಶನ ಮಾಡುತ್ತೇನೆ ಎಂದು ಜನಾರ್ಧನ್ ರೆಡ್ಡಿ ತಿಳಿಸಿದ್ದಾರೆ.