ನಿಮ್ಮ ಬಗ್ಗೆ ನಮ್ಮಲ್ಲಿ ಮಾಹಿತಿಯಿದೆ, ತಡ ಮಾಡಬೇಡಿ, ಕಪ್ಪು ಹಣ ಘೋಷಿಸಿಕೊಳ್ಳಿ: ಆದಾಯ ತೆರಿಗೆ ಇಲಾಖೆ ಎಚ್ಚರಿಕೆ
ನವದೆಹಲಿ (ಮಾ.24): ಈಗಲೂ ತಮ್ಮ ಬಳಿ ಕಪ್ಪು ಹಣ ಶೇಖರಿಸಿಟ್ಟವರಿಗೆ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನಿಮ್ಮ ನಗದು ಜಮಾವಣೆ ಬಗ್ಗೆ ನಮ್ಮ ಬಳಿ ಮಾಹಿತಿಯಿದೆ. ಆದುದರಿಂದ ಆದಷ್ಟು ಬೇಗ ತಮ್ಮ ಕಪ್ಪು-ಹಣದ ಬಗ್ಗೆ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಘೋಷಿಸಿಕೊಳ್ಳಿ ಹಾಗೂ ದಂಡದಿಂದ ಪಾರಾಗಿ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಕಪ್ಪು ಹಣ ಹೊಂದಿದ್ದಲ್ಲಿ ಮಾ.31ವರೆಗೆ ಸಮಯಾವಕಾಶವಿದೆ, ಆ ಬಳಿಕ ಭಾರೀ ದಂಡ ತೆರಬೇಕಾಗುವುದೆಂದು ಇಲಾಖೆಯ ಪ್ರಕಟಣೆ ಹೇಳಿದೆ.
