Asianet Suvarna News Asianet Suvarna News

ಶೀಘ್ರವೇ ಮತ್ತೆ ಬಿಎಸ್ ವೈಗೆ ಮುಖ್ಯಮಂತ್ರಿ ಪಟ್ಟ..?

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರು ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ. ಅವರಿಗೆ ಮುಖ್ಯಮಂತ್ರಿ ಪಟ್ಟದ ಯೋಗವಿದೆ ಎಂದು ಸತ್ಯಾತ್ಮತೀರ್ಥ ಸ್ವಾಮೀಜಿ ಭವಿಷ್ಯ ಹೇಳಿದ್ದಾರೆ. 

Is BSY Again Become Karnataka CM
Author
Bengaluru, First Published Aug 10, 2018, 9:00 AM IST

ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರು ನಗರದಲ್ಲಿ ಚಾತುರ್ಮಾಸ್ಯ ಆಚರಿಸುತ್ತಿರುವ ಉತ್ತರಾದಿ ಮಠಾಧೀಶರಾದ ಸತ್ಯಾತ್ಮತೀರ್ಥ ಸ್ವಾಮೀಜಿಯನ್ನು ಗುರುವಾರ ಭೇಟಿಯಾಗಿ ಆಶಿರ್ವಾದ ಪಡೆದರು.

ಈ ಸಂದರ್ಭದಲ್ಲಿ ಗುರುಗಳು ಯಡಿಯೂರಪ್ಪನವರೊಂದಿಗೆ ಉಭಯಕುಶಲೋಪರಿ ವಿಚಾರಿಸುತ್ತಲೇ ಹತ್ತಿರ ಕರೆದು ‘ನೀವು ಯಾವುದಕ್ಕೂ ಅಂಜಬೇಡಿ. ಹಿಂದೆ ಸರಿಯಬೇಡಿರಿ, ಮುನ್ನುಗ್ಗಿರಿ, ನಿಮಗೆ ಉತ್ತಮ ಯೋಗವಿದೆ’ ಎಂದ ಪ್ರಸಂಗವೂ ನಡೆಯಿತು. 

ಈ ಹಂತದಲ್ಲಿ ಸ್ವಾಮೀಜಿ, ‘ಯಡಿಯೂರಪ್ಪನವರಿಗೆ ಮಂತ್ರಿಗಿರಿ ಯೋಗವಿದೆ’ ಎಂದಾಗ ಸೇರಿದ್ದ ಜನಸ್ತೋಮ ‘ಮುಖ್ಯಮಂತ್ರಿಗಿರಿ’ ಎಂದು ಹೇಳಿದರು. ಆಗ ಸ್ವಾಮೀಜಿ ‘ಮಂತ್ರಿ ಎಂದರೆ ಅದೆಲ್ಲವೂ ಒಂದೇ ಅರ್ಥ...’ ಎಂದು ನಕ್ಕರು.

Follow Us:
Download App:
  • android
  • ios