ಮೊದಲೇ ಬೆಂಗಳೂರು ಸೇರಿದಂತೆ ನಗರವಾಸಿಗಳು ವಾರದ ಕೊನೆಯಲ್ಲಿ ಪ್ರವಾಸ, ಊರು ಬಿಡುವುದು ಸಾಮಾನ್ಯ. ಆ ದಿನಗಳಲ್ಲಿ ಚುನಾವಣಾ ಆಯೋಗ ಮತದಾರರನ್ನು ಎಷ್ಟೆ ಓಲೈಸಿದರೂ ಮತಗಟ್ಟೆಗೆ ಆಗಮಿಸುವುದು ಕಡಿಮೆ

ಬೆಂಗಳೂರು(ಮಾ.27): ಕೇಂದ್ರ ಚುನಾವಣಾ ಆಯೋಗ ಕರ್ನಾಟಕದ ಚುನಾವಣೆ ದಿನಾಂಕವನ್ನು ಇಂದು ಪ್ರಕಟಿಸಿದ್ದು ಮೇ.12ರಂದು ಏಕಹಂತದ ಚುನಾವಣೆ ನಡೆಯಲಿದ್ದು ಮೇ.15ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ನೀತಿ ಸಂಹಿತೆ ಕೂಡ ರಾಜ್ಯಾದ್ಯಂತ ಇಂದೇ ಜಾರಿಯಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೇ.12ರಂದು ಚುನಾವಣೆ ನಡೆಯುವ ದಿನದಂತೆ ಐಪಿಎಲ್'ನ ಬೆಂಗಳೂರಿನಲ್ಲಿ ರಾತ್ರಿ 8 ಗಂಟೆಗೆ ಡೆಲ್ಲಿ ವಿರುದ್ಧ ಆರ್'ಸಿ'ಬಿ ಪಂದ್ಯ ನಡೆಯಲಿದೆ. ಅಂದು 4 ಗಂಟೆಗೆ ಇಂಧೂರ್'ನಲ್ಲಿ ಪಂಜಾಬ್ ಹಾಗೂ ಕೋಲ್ಕತ್ತಾ ಪಂದ್ಯ ನಡೆಯಲಿದೆ. ಐಪಿಎಲ್ ಪಂದ್ಯಗಳು ನಡೆಯುವ ದಿನವೇ ಚುನಾವಣೆ ನಡೆಯುವುದರಿಂದ ಮತ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯಿದೆ.

ಮೊದಲೇ ಬೆಂಗಳೂರು ಸೇರಿದಂತೆ ನಗರವಾಸಿಗಳು ವಾರದ ಕೊನೆಯಲ್ಲಿ ಪ್ರವಾಸ, ಊರು ಬಿಡುವುದು ಸಾಮಾನ್ಯ. ಆ ದಿನಗಳಲ್ಲಿ ಚುನಾವಣಾ ಆಯೋಗ ಮತದಾರರನ್ನು ಎಷ್ಟೆ ಓಲೈಸಿದರೂ ಮತಗಟ್ಟೆಗೆ ಆಗಮಿಸುವುದು ಕಡಿಮೆ. ಐಪಿಎಲ್ ದಿನದ ಬದಲು ಬೇರೆ ದಿನ ಚುನಾವಣೆ ದಿನಾಂಕ ಪ್ರಕಟಿಸಿದ್ದರೆ ಮತದಾನದ ಸರಾಸರಿ ಪ್ರಮಾಣ ಹೆಚ್ಚಾಗುತ್ತಿತ್ತು. ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಆಯೋಗ ಕೂಡ ಹೆಚ್ಚು ಜಾಗೃತಿ ವಹಿಸಬೇಕಿತ್ತು ಎಂಬುದು ಹಲವರ ಪ್ರಶ್ನೆಯಾಗಿದೆ.