ವಿಶ್ವದಲ್ಲಿಯೇ ಅಧಿಕ ಬಂಗಾರ ಬಳಸುವ  ದೇಶಗಳಲ್ಲಿ ಭಾರತ 2ನೇ ಸ್ಥಾನದಲ್ಲಿದ್ದು, ಗುರುವಾರ ಮಂಡನೆಯಾಗುವ ಕೇಂದ್ರ ಬಜೆಟ್’ನಲ್ಲಿ  ಬಂಗಾರದ ಆಮದು ಸುಂಕ ಕಡಿತ ಘೋಷಣೆಯಾಗುವ ಸಾಧ್ಯತೆ ಇದೆ.

ನವದೆಹಲಿ : ವಿಶ್ವದಲ್ಲಿಯೇ ಅಧಿಕ ಬಂಗಾರ ಬಳಸುವ ದೇಶಗಳಲ್ಲಿ ಭಾರತ 2ನೇ ಸ್ಥಾನದಲ್ಲಿದ್ದು, ಗುರುವಾರ ಮಂಡನೆಯಾಗುವ ಕೇಂದ್ರ ಬಜೆಟ್’ನಲ್ಲಿ ಬಂಗಾರದ ಆಮದು ಸುಂಕ ಕಡಿತ ಘೋಷಣೆಯಾಗುವ ಸಾಧ್ಯತೆ ಇದೆ.

Add Asianetnews Kannada as a Preferred SourcegooglePreferred

ಚಿನ್ನದ ವ್ಯಾಪಾರಿಗಳು ಈ ನಿಟ್ಟಿನಲ್ಲಿ ಬಂಗಾರವನ್ನು ಕೊಳ್ಳುವ ಪ್ರಕ್ರಿಯೆಯನ್ನು ಮುಂದೂಡುತ್ತಿದ್ದಾರೆ. ಆಮದು ಸುಂಕ ಕಡಿತದಿಂದ ಬೇಡಿಕೆ ಹೆಚ್ಚಾಗುವ ಸಾಧ್ಯತೆಯಿದ್ದು, ಕಳೆದ 17 ತಿಂಗಳಿನಿಂದ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ.

ಜಾಗತಿಕ ಬೆಲೆಯನ್ನು ಬೆಂಬಲಿಸಲಿದೆ. ಚಿನ್ನದ ಮೇಲೆ ಶೇ.10ರಷ್ಟು ಆಮದು ಸುಂಕ ವಿಧಿಸಲು ಆರಂಭಿಸಿದಂದಿನಿಂದಲೂ ಚಿನ್ನ ಕಳ್ಳ ಸಾಗಣೆ ಹೆಚ್ಚುತ್ತಿದೆ. ಸುಂಕ ಕಡಿತದಿಂದ ಅಕ್ರಮ ದಂಧೆಯನ್ನು ನಿಲ್ಲಿಸಬಹುದೆಂಬ ನಿರೀಕ್ಷೆ ಇದೆ.