ತಾಯ್ನಾಡಿಗೆ ಮರಳಿದ ಭಾರತಾಂಬೆಯ ವೀರ ಪುತ್ರ| ವಾಘಾ ಗಡಿ ಮೂಲಕ ಭಾರತಕ್ಕೆ ಬಂದ ವಿಂಗ್ ಕಮಾಂಡರ್ ಅಭಿನಂದನ್| ಅಭಿನಂದನ್ ಅವರನ್ನು ಸುಪರ್ದಿಗೆ ಪಡೆದ ಭಾರತೀಯ ವಾಯುಸೇನೆ| ಅಭಿನಂದನ್ ಅವರ ವೈದ್ಯಕೀಯ ತಪಾಸಣೆಗೆ ಮುಂದಾದ ವಾಯುಸೇನೆ|
ಅಮೃತ್ಸರ್(ಮಾ.01): ಪಾಕ್ ವಶದಲ್ಲಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಕೊನೆಗೂ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ.
ರಾತ್ರಿ ಸುಮಾರು 9-20ರ ಸುಮಾರಿಗೆ ಅಭಿನಂದನ್ ಅವರನ್ನು ವಾಘಾ ಗಡಿಯ ಮೂಲಕ ಭಾರತಕ್ಕೆ ಹಸ್ತಾಂತರಿಸಲಾಯಿತು. ಇನ್ನು ಅಭಿನಂದನ್ ಬರುವಿಕೆಯನ್ನು ಕಾಯುತ್ತಿದ್ದ ಭಾರತೀಯ ವಾಯುಸೇನಾಧಿಕಾರಿಗಳು, ವಿಂಗ್ ಕಮಾಂಡರ್ ಅವರನ್ನು ತಮ್ಮ ಸುಪರ್ದಿಗೆ ಪಡೆದಿದೆ.
Air Vice Marshal RGK Kapoor at Attari-Wagah border: Wing Commander #AbhinandanVarthaman has been handed over to us. He will now be taken for a detailed medical checkup because he had to eject from an aircraft. IAF is happy to have him back. pic.twitter.com/ZaaafjUQ90
— ANI (@ANI) March 1, 2019
ಈ ಕುರಿತು ಮಾಹಿತಿ ನೀಡಿರುವ ಏರ್ ವೈಸ್ ಮಾರ್ಷಲ್ ಆರ್ಜಿಕೆ ಕಪೂರ್, ಅಭಿನಂದನ್ ಭಾರತಕ್ಕೆ ಮರಳಿದ್ದು, ನಮ್ಮ ವೀರ ಯೋಧನ ಮರಳುವಿಕೆ ಸಂತಸ ತಂದಿದೆ ಎಂದು ಹೇಳಿದ್ದಾರೆ. ಅಲ್ಲದೇ ಅಭಿನಂದನ್ ವಿಮಾನದಿಂದ ಹಾರಿದ್ದರಿಂದ ಅವರ ವೈದ್ಯಕೀಯ ತಪಾಸಣೆ ಅವಶ್ಯಕತೆ ಇದ್ದು, ಕೂಡಲೇ ಅವರನ್ನು ಸೇನಾ ಆಸ್ಪತ್ರೆಗೆ ರವಾನಿಸಲಾಗುವುದು ಎಂದು ತಿಳಿಸಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Mar 1, 2019, 10:13 PM IST