ಭಾರತ ನೀಡಿರುವ ಈ ಮೂರನೇ ಕಂತಿನ ಸಾಲದ ಹಣವನ್ನು ಬಾಂಗ್ಲಾದೇಶದಲ್ಲಿ 17 ಪ್ರಮುಖ ಯೋಜನೆಗಳಿಗೆ ಬಳಸುವ ಉದ್ದೇಶವಿದೆ. ವಿದ್ಯುತ್, ಸಾರಿಗೆ, ರಸ್ತೆ, ಹಡಗು, ಬಂದರು ಮೊದಲಾದ ಮೂಲಸೌಕರ್ಯದ ಅಭಿವೃದ್ಧಿಗೆ ಹಣದ ವಿನಿಯೋಗವಾಗಲಿದೆ. ಆದರೆ ಈ ಯೋಜನೆಯ ಕಾಮಗಾರಿಗಳಲ್ಲಿ ಬಾಂಗ್ಲಾದೇಶವು ಶೇ.65ರಷ್ಟು ಸೇವೆ ಮತ್ತು ಸಾಮಗ್ರಿಗಳನ್ನು ಭಾರತೀಯ ಮಾರುಕಟ್ಟೆಯಿಂದಲೇ ಖರೀದಿಸಬೇಕು ಎಂಬುದು ಸಾಲದ ಒಪ್ಪಂದದಲ್ಲಿರುವ ಪ್ರಮುಖ ಷರತ್ತಾಗಿದೆ.
ನವದೆಹಲಿ(ಅ. 04): ನೆರೆಯ ಬಾಂಗ್ಲಾದೇಶದ ಅಭಿವೃದ್ಧಿಗಾಗಿ ಭಾರತ ಸರಕಾರ 4.5 ಬಿಲಿಯನ್ ಡಾಲರ್(ಸುಮಾರು 30 ಸಾವಿರ ರೂಪಾಯಿ) ಹಣವನ್ನು ಸಾಲವಾಗಿ ನೀಡಿದೆ. ಬಾಂಗ್ಲಾದೇಶದ ಮೂಲಭೂತ ಸೌಕರ್ಯ, ಸಾಮಾಜಿಕ ವಲಯದ ಅಭಿವೃದ್ಧಿಗಾಗಿ ಈ ಸಾಲ ಕೊಟ್ಟಿರುವುದಾಗಿ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ಭಾರತ ಮತ್ತು ಬಾಂಗ್ಲಾದ ವಿತ್ತ ಸಚಿವರು ಈ ಸಂಬಂಧ ಒಪ್ಪಂದಕ್ಕೆ ಸಹಿಹಾಕಿದ್ದಾರೆ. ಇದು ಬಾಂಗ್ಲಾದೇಶಕ್ಕೆ ಭಾರತ ಕೊಡುತ್ತಿರುವ ಮೂರನೇ ಕಂತಿನ ಸಾಲವಾಗಿದೆ. ಕಳೆದ ಏಪ್ರಿಲ್ ತಿಂಗಳಲ್ಲಿ ಭಾರತಕ್ಕೆ ಬಾಂಗ್ಲಾ ಪ್ರಧಾನಿ ಬಂದಾಗಲೇ ಈ ಸಾಲದ ಘೋಷಣೆಯಾಗಿತ್ತು.
ಭಾರತ ನೀಡಿರುವ ಈ ಮೂರನೇ ಕಂತಿನ ಸಾಲದ ಹಣವನ್ನು ಬಾಂಗ್ಲಾದೇಶದಲ್ಲಿ 17 ಪ್ರಮುಖ ಯೋಜನೆಗಳಿಗೆ ಬಳಸುವ ಉದ್ದೇಶವಿದೆ. ವಿದ್ಯುತ್, ಸಾರಿಗೆ, ರಸ್ತೆ, ಹಡಗು, ಬಂದರು ಮೊದಲಾದ ಮೂಲಸೌಕರ್ಯದ ಅಭಿವೃದ್ಧಿಗೆ ಹಣದ ವಿನಿಯೋಗವಾಗಲಿದೆ. ಆದರೆ ಈ ಯೋಜನೆಯ ಕಾಮಗಾರಿಗಳಲ್ಲಿ ಬಾಂಗ್ಲಾದೇಶವು ಶೇ.65ರಷ್ಟು ಸೇವೆ ಮತ್ತು ಸಾಮಗ್ರಿಗಳನ್ನು ಭಾರತೀಯ ಮಾರುಕಟ್ಟೆಯಿಂದಲೇ ಖರೀದಿಸಬೇಕು ಎಂಬುದು ಸಾಲದ ಒಪ್ಪಂದದಲ್ಲಿರುವ ಪ್ರಮುಖ ಷರತ್ತಾಗಿದೆ.
ಅಷ್ಟೇ ಅಲ್ಲದೇ, ಈ ಸಾಲವನ್ನು ಬಾಂಗ್ಲಾದೇಶವು 20-25 ವರ್ಷಗಳಲ್ಲಿ ತೀರಿಸಬೇಕಿದೆ. ಪ್ರತೀ ವರ್ಷ ಶೇ.1ರಷ್ಟು ಬಡ್ಡಿದರ ಅನ್ವಯವಾಗುತ್ತದೆ.
ಭಾರತ ಮತ್ತು ಬಾಂಗ್ಲಾದೇಶ ನಡುವೆ ಆರ್ಥಿಕ ಸಂಬಂಧಗಳು ಇತ್ತೀಚಿನ ದಿನಗಳಲ್ಲಿ ಉತ್ತಮಗೊಂಡಿವೆ. 2010 ಮತ್ತು 2016ರಲ್ಲಿ ಬಾಂಗ್ಲಾಗೆ ಭಾರತ ಎರಡು ಕಂತುಗಳ ಸಾಲ ಮಂಜೂರು ಮಾಡಿತ್ತು.
