ಆಧಾರ್'ನಿಂದ ರೇಷನ್ ಸಿಗದೆ ಹಸಿವಿನಿಂದ ಬಾಲಕಿ ಸಾವು..!
ರೇಷನ್ ಕಾರ್ಡ್ಗೆ ಆಧಾರ್ ಜೋಡಣೆ ಮಾಡದ ಕಾರಣಕ್ಕಾಗಿ ರೇಷನ್ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನಾವಿಂದು ಪುತ್ರಿಯನ್ನು ಕಳೆದುಕೊಂಡಿದ್ದೇವೆ ಎಂದು ಬಾಲಕಿಯ ತಾಯಿ ಕೋಯಿಲಿ ದೇವಿ ಆರೋಪಿಸಿದ್ದಾರೆ.
ರಾಂಚಿ(ಅ.17): ಜಾರ್ಖಂಡ್'ನ ಸಿಮ್'ಡೆಗಾ ಜಿಲ್ಲೆಯಲ್ಲಿ ನಾಲ್ಕು ದಿನಗಳ ನಿರಂತರ ಹಸಿವಿನ ಬಾಧೆ ತಾಳಲಾರದೆ 11 ವರ್ಷದ ಬಾಲಕಿ ಸಾವಿಗೀಡಾಗಿರುವ ದಾರುಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ರೇಷನ್ ಕಾರ್ಡ್ಗೆ ಆಧಾರ್ ಜೋಡಣೆ ಮಾಡದ ಕಾರಣಕ್ಕಾಗಿ ರೇಷನ್ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ನಾವಿಂದು ಪುತ್ರಿಯನ್ನು ಕಳೆದುಕೊಂಡಿದ್ದೇವೆ ಎಂದು ಬಾಲಕಿಯ ತಾಯಿ ಕೋಯಿಲಿ ದೇವಿ ಆರೋಪಿಸಿದ್ದಾರೆ.
ಜಿಲ್ಲೆಯ ಕರಿಮಟಿ ಗ್ರಾಮದಲ್ಲಿ ವಾಸವಾಗಿರುವ ಕುಟುಂಬ ಸದಸ್ಯರ ಬಳಿ ಆಧಾರ್ ಕಾರ್ಡ್ಗಳಿವೆ. ಆದರೆ, ತಾಂತ್ರಿಕ ಕಾರಣದಿಂದಾಗಿ ರೇಷನ್ ಕಾರ್ಡ್ನೊಂದಿಗೆ ಆಧಾರ್ ಜೋಡಣೆ ಸಾಧ್ಯವಾಗಿರಲಿಲ್ಲ. ಆ ಕಾರಣ ರೇಷನ್ ಸಿಗದೇ ಬಾಲಕಿಯಾದ ಸಂತೋಷಿ ಕುಮಾರಿ(11) ಹಸಿವಿನಿಂದ ಮೃತ ಪಟ್ಟಿದ್ದಾಳೆ ಎಂದು ದೂರಲಾಗಿದೆ.