ತೀವ್ರ ಸ್ವರೂಪ ಪಡೆದುಕೊಂಡ IMA ವಂಚನೆ ಪ್ರಕರಣ: CCB ಬದಲಿಗೆ SITಗೆ
IMA ಬಹುಕೋಟಿ ವಂಚನೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ ಹೆಗಲಿಗೆ ವಹಿಸಿದೆ.
ಬೆಂಗಳೂರು, (ಜೂನ್.11): ಐಎಂಎ ಜ್ಯುವೆಲರಿ ಬಹುಕೋಟಿ ವಂಚನೆ ಪ್ರಕರಣದ ತನಿಖೆಯ ಜವಾಬ್ದಾರಿಯನ್ನು ಸಿಸಿಬಿಗೆ ವಹಿಸಿದ್ದ ರಾಜ್ಯ ಸರ್ಕಾರ ಇದೀಗ ಪ್ರಕರಣದ ವಿಚಾರಣೆಯನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಿದೆ.
ಪತ್ನಿಯರೊಂದಿಗೆ ಮನ್ಸೂರ್ ಪರಾರಿ! ‘ಡೈರೆಕ್ಟರ್ ಖೆಡ್ಡಾ’ ತೋಡಿದ ಪೊಲೀಸರು
ಈ ಮೊದಲು ಐಎಂಎ ಬಹುಕೋಟಿ ವಂಚನೆ ಕೇಸ್ನ್ನು ಸಿಎಂ ಕುಮಾರಸ್ವಾಮಿ ಅವರು ಸಿಸಿಬಿಗೆ ವಹಿಸಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದರು.
Considering the seriousness of the #IMAJewels fraud, the inquiry has been handed over to a special investigation team and instructions regarding this have been given to the DGP.
— CM of Karnataka (@CMofKarnataka) June 11, 2019
ಆದರೆ, ಇದೀಗ ಸಿಎಂ ಒಂದು ಹೆಜ್ಜೆ ಮುಂದೆ ಹೋಗಿದ್ದು, ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳ (ಎಸ್ಐಟಿ)ಕ್ಕೆ ವಹಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.