Asianet Suvarna News Asianet Suvarna News

ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ: ಶಿವಸೇನೆ

ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಿಸುವುದನ್ನು ಖಂಡಿಸಿ  ಕೇರಳದ ಅನೇಕ ಕಡೆ ಪ್ರತಿಭಟನೆಗಳು ಮುಂದುವರಿಕೆ |  ಕೇರಳ ಶಿವಸೇನೆಯಿಂದ 7 ಮಹಿಳೆಯರ ‘ಆತ್ಮಹತ್ಯಾ ದಳ!’ ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದರೆ ಆತ್ಮಹತ್ಯೆ: ಬೆದರಿಕೆ

If women enter Shabarimala Shivsena activists threaten to commit suicide
Author
Bengaluru, First Published Oct 14, 2018, 9:03 AM IST

ತಿರುವನಂತಪುರಂ (ಅ. 14): ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಪ್ರವೇಶಿಸಿದರೆ ತನ್ನ ‘ಆತ್ಮಹತ್ಯಾ ದಳ’ದ 7 ಮಹಿಳಾ ಸದಸ್ಯರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಕೇರಳ ಶಿವಸೇನಾ ಘಟಕ ಎಚ್ಚರಿಕೆ ನೀಡಿದೆ.

ಮುಚ್ಚಿರುವ ದೇವಾಲಯದ ಬಾಗಿಲು ಅಕ್ಟೋಬರ್‌ 17ರಂದು ತೆರೆಯಲಿದ್ದು, ಅಂದು ಮಹಿಳೆಯರ ಪ್ರವೇಶ ತಡೆಯಲು ಪಂಪಾ ನದಿ ತಟದಲ್ಲಿ ಮಹಿಳೆಯರಿಂದಲೇ ಪ್ರತಿಭಟನೆ ನಡೆಸಲಾಗುತ್ತದೆ. ಈ ಪ್ರತಿಭಟನಾನಿರತರಲ್ಲಿ 7 ಮಂದಿಯ ‘ಆತ್ಮಹತ್ಯಾ ದಳ’ ಇರಲಿದೆ. ಒಂದು ವೇಳೆ ಮಹಿಳೆಯರಿಗೆ ಪ್ರವೇಶ ಲಭಿಸಿದರೆ ಅವರು ಪಂಪಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಕೇರಳ ಶಿವಸೇನಾ ನಾಯಕ ಪೆರಿಂಗಮ್ಮಾಳ್‌ ಆಜಿ ಶನಿವಾರ ಹೇಳಿದರು.

ಈ ನಡುವೆ, ಶಬರಿಮಲೆ ಅಯ್ಯಪ್ಪ ದೇವಸ್ವಂ ಮಂಡಳಿಯ ಮಾಜಿ ಅಧ್ಯಕ್ಷ ಪ್ರಯರ್‌ ಗೋಪಾಲಕೃಷ್ಣನ್‌ ಕೂಡ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ‘ದೇಗುಲ ಪ್ರವೇಶಿಸುವ ಮಹಿಳೆಯರನ್ನು ಹುಲಿಗಳು ಹಾಗೂ ಪುರುಷರು ಹಿಡಿಯಲಿದ್ದಾರೆ’ ಎಂದು ಪ್ರಯರ್‌ ಎಚ್ಚರಿಸಲಿದ್ದಾರೆ.

Follow Us:
Download App:
  • android
  • ios