ಗೋಮಾಂಸ ಇದ್ರೆ ಮೌಲ್ವಿಗಳು ನಿಖಾ ಮಾಡಿಸಲ್ವಂತೆ!
ಗೋವುಗಳ ಸಾಗಾಟಗಾರರು ಮತ್ತು ಗೋರಕ್ಷಕರ ನಡುವಿನ ಕಿತ್ತಾಟದಿಂದ ಇತ್ತೀಚಿನ ದಿನಗಳಲ್ಲಿ ಬಹು ಚರ್ಚೆಯಲ್ಲಿರುವ ಚಂಡೀಗಢದಲ್ಲಿ, ಕೋಮುಸೌಹಾರ್ಧ ಕಾಪಾಡಲು, ಸ್ಥಳೀಯ ಮೌಲ್ವಿಗಳು ಹೊಸ ನಿರ್ಧಾರ ಕೈಗೊಂಡಿದ್ದಾರೆ.
ಚಂಡೀಗಢ (ಜ.31): ಗೋವುಗಳ ಸಾಗಾಟಗಾರರು ಮತ್ತು ಗೋರಕ್ಷಕರ ನಡುವಿನ ಕಿತ್ತಾಟದಿಂದ ಇತ್ತೀಚಿನ ದಿನಗಳಲ್ಲಿ ಬಹು ಚರ್ಚೆಯಲ್ಲಿರುವ ಚಂಡೀಗಢದಲ್ಲಿ, ಕೋಮುಸೌಹಾರ್ಧ ಕಾಪಾಡಲು, ಸ್ಥಳೀಯ ಮೌಲ್ವಿಗಳು ಹೊಸ ನಿರ್ಧಾರ ಕೈಗೊಂಡಿದ್ದಾರೆ.
ಇದರನ್ವಯ, ಇನ್ನು ಮುಂದೆ ನಿಖಾ (ವಿವಾಹ) ಔತಣದಲ್ಲಿ ಗೋಮಾಂಸದ ಅಡುಗೆ ಇರುವುದಿಲ್ಲ ಎಂದು ವಧು-ವರನ ಕಡೆಯವರು ಖಚಿತಪಡಿಸಿದ ಮೇಲಷ್ಟೇ ಮೌಲ್ವಿಗಳು ನಿಖಾ ಮಾಡಿಸುತ್ತಾರಂತೆ. ನುಹ್, ರಿವಾರಿ, ಪಲ್ವಾಲ್, ಫರೀದಾದಾಬಾದ್ ಪ್ರದೇಶದ ಮೌಲ್ವಿಗಳು ಇಂಥದ್ದೊಂದು ನಿರ್ಧಾರ ಕೈಗೊಂಡಿದ್ದಾರೆ.