ಮೊನ್ನೆ ‘ಪಾಕಿಸ್ತಾನ ನನಗೆ ಭಾರತದಂತೆಯೆ ಪ್ರಿಯವಾದ ದೇಶ’ ಪಾಕಿಸ್ತಾನದಲ್ಲಿ ನನಗೆ ಸಿಗುವ ಪ್ರೀತಿಗಿಂತ ಹೆಚ್ಚಾಗಿ ನಾನು ಭಾರತದಲ್ಲಿ ದ್ವೇಷಿಸಲ್ಪಡುತ್ತೇನೆ’

ಕರಾಚಿ: ಮೊನ್ನೆ ‘ಪಾಕಿಸ್ತಾನ ನನಗೆ ಭಾರತದಂತೆಯೆ ಪ್ರಿಯವಾದ ದೇಶ’ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಉಚ್ಚಾಟಿತ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ‘ಪಾಕಿಸ್ತಾನದಲ್ಲಿ ನನಗೆ ಸಿಗುವ ಪ್ರೀತಿಗಿಂತ ಹೆಚ್ಚಾಗಿ ನಾನು ಭಾರತದಲ್ಲಿ ದ್ವೇಷಿಸಲ್ಪಡುತ್ತೇನೆ’ ಎಂದು ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಸಾಹಿತ್ಯ ಹಬ್ಬದಲ್ಲಿ ಭಾಗವಹಿಸಲು ಪಾಕಿಸ್ತಾನ ಪ್ರವಾಸದಲ್ಲಿರುವ ಅಯ್ಯರ್, ನಾನು ಶಾಂತಿಯನ್ನು ಪ್ರತಿಪಾದಿಸುವುದರಿಂದ ಪಾಕಿಸ್ತಾನದ ಜನರು ನನ್ನನು ಇಷ್ಟಪಡುತ್ತಾರೆ, ಎಂದಿದ್ದಾರೆ

ನನಗೆ ಗುರುತು-ಪರಿಚಯವಿಲ್ಲದ ಜನರೂ ಕೂಡಾ ಇಲ್ಲಿ ತಬ್ಬಿಕೊಳ್ಳುತ್ತಾರೆ. ಪಾಕಿಸ್ತಾನದಲ್ಲಿ ನನಗೆ ಸಿಗುವ ಪ್ರೀತಿಗಿಂತ ಹೆಚ್ಚಾಗಿ ನಾನು ಭಾರತದಲ್ಲಿ ದ್ವೇಷಿಸಲ್ಪಡುತ್ತೇನೆ, ಎಂದು ಅಯ್ಯರ್ ಹೇಳಿದ್ದಾರೆ.

ನಿರಂತರ ಮಾತುಕತೆಯ ಮೂಲಕ ಎರಡೂ ದೇಶಗಳು ಸಂಬಂಧವನ್ನು ಸುಧಾರಿಸಿಕೊಳ್ಳಬಹುದು. ಸೌಹಾರ್ದಯುತ ಮಾತುಕತೆಯೊಂದೆ ಭಾರತ - ಪಾಕಿಸ್ತಾನ ಸ್ನೇಹವೃದ್ಧಿಗೆ ಪರಿಹಾರ. ಭಾರತದಂತೆಯೇ ಪಾಕಿಸ್ತಾನವನ್ನು ಇಷ್ಟಪಡುತ್ತೇನೆ. ಭಾರತ ಕೂಡ ತನ್ನ ನೆರೆಯವರನ್ನು ತನ್ನಂತೆಯೇ ಪ್ರೀತಿಸಬೇಕು, ಎಂದು ಅಯ್ಯರ್ ಮೊನ್ನೆ ಹೇಳಿದ್ದರು.

ಕಳೆದ ಗುಜರಾತ್ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿಗೆ ಅಯ್ಯರ್ ‘ನೀಚ’ ಎಂದು ಕರೆದಿದ್ದು, ಭಾರೀ ಚರ್ಚೆಗೆ ಕಾರಣವಾಗಿತ್ತು. ಆ ಬಳಿಕ ಅಯ್ಯ್ರರ್’ರನ್ನು ಕಾಂಗ್ರೆಸ್ ಪಕ್ಷದಿಂದ ಉಚ್ಛಾಟಿಸಿದೆ.