ಸೋಶಿಯಲ್ ಮೀಡಿಯಾ ಖಾತೆಗಳು ಅದು ಯಾವ್ಯಾವುದೋ ಕಾರಣಕ್ಕೆ ಹ್ಯಾಕ್ ಆಗಿಬುಡುತ್ತವೆ. ಕೆಲವೊಮ್ಮೆ ಗೊಂದಲಗಳನ್ನು ಸೃಷ್ಟಿ ಮಾಡಿಬಿಡಬಹುದು. ಹಾಗೆಯೇ ಇಲ್ಲಿ ಮೃತ್ಯುಂಜಯ ಮುರುಘಾಮಠದ ಸ್ವಾಮೀಜಿಗಳ ಫೇಸ್ಬುಕ್ ಅಕೌಂಟ್ ಹ್ಯಾಕ್ ಆಗಿದ್ದು ಮಹಿಳೆಯೊಬ್ಬರ ಚಿತ್ರ  ಪೋಸ್ಟ್ ಮಾಡಲಾಗಿದೆ. ಭಕ್ತರು ಅನ್ಯತಾ ಭಾವಿಸಬಾರದು..ತಾಂತ್ರಿಕ ತೊಂದರೆಯಿಂದ ಹೀಗಾಗಿದೆ ಎಂದು ಮಠ ತಿಳಿಸಿದೆ.

ಧಾರವಾಡ [ಜ.11]  ಮೃತ್ಯುಂಜಯ ಮುರುಘಾಮಠದ ಸ್ವಾಮೀಜಿಗಳ ಫೇಸ್ಬುಕ್ ಅಕೌಂಟ್ ಹ್ಯಾಕ್ ಆಗಿದೆ. ಸ್ವಾಮಿಗಳ ಅಕೌಂಟ್ ಹ್ಯಾಕ್ ಮಾಡಿದ ಕಿರಾತಕರು ಮಹಿಳೆಯ ಫೋಟೋ ಒಂದನ್ನು ಅಪ್‌ಲೋಡ್ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ಮಹಿಳೆಯ ಭಾವಚಿತ್ರವನ್ನು ಪ್ರೋಫೈಲ್ ಹಾಗೂ ಕವರ್ ಪೋಟೋ ಮಾಡಿ ಹಾಕಲಾಗಿದೆ. ಹು-ಧಾ ಪೊಲೀಸ್ ಕಮಿಷನರ್ ಗೆ ಮೃತ್ಯುಂಜಯ ಮುರುಘಾಮಠದ ಸ್ವಾಮೀಜಿ ದೂರು ನೀಡಿದ್ದಾರೆ.

ಬಾಲಿವುಡ್‌ನೊಂದಿಗೆ ಮೋದಿ..ವೈರಲ್‌ ಆಯ್ತು ವರ್ಷದ ಚಿತ್ರ

ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಕಾಲೇಜಿನ ವೆಬ್‌ ತಾಣವೇ ಹ್ಯಾಕ್ ಆಗಿತ್ತು. ಸೋಶಿಯಲ್ ಮೀಡಿಯಾ ಮತ್ತು ಕೆಲ ಸಂಘ ಸಂಸ್ಥೆಗಳ ಖಾತೆ ಹ್ಯಾಕ್ ಆಗುವುದರ ಬಗ್ಗೆ ನಿರಂತರ ದೂರುಗಳು ದಾಖಲಾಗುತ್ತಲೇ ಇರುತ್ತವೆ