ರ್ಯಾನ್ ಅಂತರಾಷ್ಟ್ರೀಯ ಶಾಲೆಯಲ್ಲಿ ಹತ್ಯೆ: ಪ್ರಾಂಶುಪಾಲರ ಅಮಾನತು, ಪ್ರಕರಣದ ತನಿಖೆಗೆ ತಂಡ ರಚನೆ
ಗುರ್ಗಾಂವ್'ನಲ್ಲಿರುವ ರ್ಯಾನ್ ಅಂತರಾಷ್ಟ್ರೀಯ ಶಾಲೆಯಲ್ಲಿ ನಿನ್ನೆ 2 ನೇ ವಿದ್ಯಾರ್ಥಿ ಮೃತಪಟ್ಟಿದ್ದು ಎರಡನೇ ದಿನವಾದ ಇಂದು ನೂರಾರು ಪೋಷಕರು ಶಾಲೆ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ.
ನವದೆಹಲಿ (ಸೆ.09): ಗುರ್ಗಾಂವ್'ನಲ್ಲಿರುವ ರ್ಯಾನ್ ಅಂತರಾಷ್ಟ್ರೀಯ ಶಾಲೆಯಲ್ಲಿ ನಿನ್ನೆ 2 ನೇ ವಿದ್ಯಾರ್ಥಿ ಮೃತಪಟ್ಟಿದ್ದು ಎರಡನೇ ದಿನವಾದ ಇಂದು ನೂರಾರು ಪೋಷಕರು ಶಾಲೆ ಎದುರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಾಲಾ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ.
ನಿನ್ನೆ ಬೆಳಿಗ್ಗೆ ಶಾಲಾ ಶೌಚಾಲಯದಲ್ಲಿ 2 ನೇ ತರಗತಿ ವಿದ್ಯಾರ್ಥಿಯ ಮೃತಹೇಹ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು. ಲೈಂಗಿಕ ದೌರ್ಜನ್ಯ ಪ್ರಯತ್ನದಲ್ಲಿ ವಿಫಲವಾಗಿದ್ದಕ್ಕೆ ಹತ್ಯೆ ಮಾಡಿದ್ದೇನೆ ಎಂದು ಬಸ್ ಕಂಡಕ್ಟರ್ ಅಶೋಕ್ ತಪ್ಪೊಪ್ಪಿಗೆ ನೀಡಿದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ.
Suspended Principal.Took action against security agency of the school. Special Committee probing case: Gurugram DCP #RyanInternationalSchool pic.twitter.com/OD15XWT2cO
— ANI (@ANI) September 9, 2017
ರ್ಯಾನ್ ಅಂತರಾಷ್ಟ್ರೀಯ ಶಾಲೆಯ 2 ನೇ ತರಗತಿ ಬಾಲಕನ ಹತ್ಯೆ ಸಂಬಂಧವಾಗಿ ವಿಚಾರಣೆ ನಡೆಸಲು ತಂಡವನ್ನು ರಚಿಸಲಾಗಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಪ್ರತಿಕ್ರಿಯಿಸಿದ್ದಾರೆ. ವಿದ್ಯಾರ್ಥಿಗಳ ಭದ್ರತೆ ಕುರಿತಂತೆ ಸಿಬಿಎಸ್'ಇ ಶಾಲೆಯಿಂದ ವರದಿ ಕೇಳಿದೆ.
(ಚಿತ್ರಕೃಪೆ: ಹಿಂದೂಸ್ಥಾನ್ ಟೈಮ್ಸ್)