ಅವರಿಬ್ಬರು ಮಾಜಿ ಕಾರ್ಪೊರೇಟರೊಬ್ಬರ ಎನ್​​'ಜಿಒದಲ್ಲಿ ಕೆಲಸಕ್ಕಿದ್ದವರು. ಬರುವ ಸಂಬಳ ಸಾಲದು ಅಂತ  ಹಣ ಸಂಪಾದನೆಗೆ ಹನಿಟ್ರ್ಯಾಪ್​ ದಾರಿ  ಹಿಡಿದಿದ್ದರು. ಹುಡುಗಿಯರನ್ನು ಬಿಟ್ಟು ಯಾಮಾರಿಸಿ ದುಡ್ಡು ಮಾಡುತ್ತಿದ್ದ ಆಸಾಮಿಗಳು ಈಗ ಪೊಲೀಸರ  ಅಥಿತಿಯಾಗಿದ್ದಾರೆ.

ಬೆಂಗಳೂರು(ಜ.13): ಅವರಿಬ್ಬರು ಮಾಜಿ ಕಾರ್ಪೊರೇಟರೊಬ್ಬರ ಎನ್​​'ಜಿಒದಲ್ಲಿ ಕೆಲಸಕ್ಕಿದ್ದವರು. ಬರುವ ಸಂಬಳ ಸಾಲದು ಅಂತ ಹಣ ಸಂಪಾದನೆಗೆ ಹನಿಟ್ರ್ಯಾಪ್​ ದಾರಿ ಹಿಡಿದಿದ್ದರು. ಹುಡುಗಿಯರನ್ನು ಬಿಟ್ಟು ಯಾಮಾರಿಸಿ ದುಡ್ಡು ಮಾಡುತ್ತಿದ್ದ ಆಸಾಮಿಗಳು ಈಗ ಪೊಲೀಸರ ಅಥಿತಿಯಾಗಿದ್ದಾರೆ.

ಮಾಜಿ ಕಾರ್ಪೊರೇಟರ್​ ಕಚೇರಿ ಸಿಬ್ಬಂದಿ ಪೊಲೀಸರ ಬಲೆಗೆ

ಈ ಫೋಟೋದಲ್ಲಿ ಫೋಸ್​ ಕೊಡ್ತಿರೋ ಇವರೇ ಹನಿಟ್ರ್ಯಾಪ್​ ಕಿಂಗ್​'ಪಿನ್'​ಗಳು ಹೆಸರು ಆನಂದ್​ ಆಚಾರ್​ ಮತ್ತು ರವಿಕುಮಾರ್. ಇವರಿಬ್ಬರು ವಿಜಯನಗರದ ಮಾರೇನಹಳ್ಳಿಯ ಮಾಜಿ ಕಾರ್ಪೊರೇಟ್​ ವಾಗೀಶ್​ ಕಚೇರಿಯ ಸಿಬ್ಬಂದಿ. ಸದ್ಯ ಪೊಲೀಸರ ಅಥಿತಿಗಳು.

ಸಾಫ್ಟ್​ವೇರ್​ ಇಂಜೀನಿಯರ್​ನಿಂದ ಬಯಲಾಯ್ತು ಹನಿಟ್ರ್ಯಾಪ್​ ಜಾಲ ಪತ್ತೆಯಾಗಿದ್ದು ಹೇಗೆ?

ಆಸಾಮಿಗಳು ಬಲೆಗೆ ಬಿದ್ದಿದ್ದು ಹೇಗೆ?

ಇನ್ನೂ ಇವರ ಬಿಸಿನೆಸ್ ಸೆಂಟರ್ ವಿಜಯನಗರ. ಲೊಕ್ಯಾಂಟೋ ವೆಬ್​ಸೈಟ್​ ಮೂಲಕ ವ್ಯವಹಾರ ನಡೆಸುತ್ತಿದ್ರು. ಆನ್​ ಲೈನ್​ನಲ್ಲೇ ಗಿರಾಕಿಗಳನ್ನು ಕುದುರಿಸ್ತಾ ಇದ್ರು. ಗಿರಾಕಿಗಳು ಬಂದ ಕೂಡ್ಲೇ ಮೂವರು ಯುವತಿಯರನ್ನು ಬಿಟ್ಟು ಡೀಲ್ ನಡೆಸುತ್ತಿದ್ರು.ಈ ಗ್ಯಾಂಗ್​​ ಸಾಫ್ಟವೇರ್ ಎಂಜಿನಿಯರ್ ಒಬ್ಬರನ್ನು ಕರೆಸಿ ಹತ್ತು ಸಾವಿರ ಹಣವನ್ನು ದೋಚಿದ್ದಾರೆ. ಇದ್ರಿಂದ ಬೆದರಿದ ಎಂಜಿನಿಯರ್ ನಗರ ಪೊಲೀಸ್ ಆಯುಕ್ತರಿಗೆ ಇ ಮೇಲ್ ನ ಮೂಲಕ ದೂರನ್ನ ನೀಡಿದಾಗ ಜಾಲ ಬಯಲಿಗೆ ಬಂದಿದೆ.

ವಿಜಯನಗರ ಪೊಲೀಸರು ಹನಿಟ್ರ್ಯಾಪ್​ ಜಾಲವನ್ನು ಭೇದಿಸಿ ಇಬ್ಬರನ್ನು ಅರೆಸ್ಟ್​ ಮಾಡಿದ್ದಾರೆ. ಸದ್ಯ ಯುವತಿಯರ ಬಂಧನಕ್ಕೆ ಬಲೆ ಬೀಸಿದ್ದು ತನಿಖೆ ಚುರುಕುಗೊಳಿಸಿದ್ದಾರೆ.