ಮಾದಪ್ಪನ ಭಕ್ತರ ಮೇಲೆ ಹೆಜ್ಜೇನು ದಾಳಿ
ಜಿಲ್ಲೆಯ ಯಳಂದೂರಿನಲ್ಲಿ ಮಾದಪ್ಪನ ಭಕ್ತರ ಮೇಲೆ ಹೆಜ್ಜೇನು ದಾಳಿ ಮಾಡಿದ್ದು ಭಕ್ತರು ಓಡಿ ಹೋಗಿದ್ದಾರೆ.
ಚಾಮರಾಜನಗರ (ಫೆ.17): ಜಿಲ್ಲೆಯ ಯಳಂದೂರಿನಲ್ಲಿ ಮಾದಪ್ಪನ ಭಕ್ತರ ಮೇಲೆ ಹೆಜ್ಜೇನು ದಾಳಿ ಮಾಡಿದ್ದು ಭಕ್ತರು ಓಡಿ ಹೋಗಿದ್ದಾರೆ.
ಮಾದಪ್ಪನ ಜಾತ್ರೆ ಮುಗಿಸಿಕೊಂಡು ಯಳಂದೂರಿನ ಕಾರಾಪುರ ಮಠದ ಸಮೀಪ ಭಕ್ತರು ತಂಗಿದ್ದರು. ಆ ಸಂದರ್ಭದಲ್ಲಿ ಏಕಾಏಕಿ ಹೆಜ್ಜೇನು ದಾಳಿ ಮಾಡಿದೆ. ಹೆಜ್ಜೇನು ದಾಳಿಯಿಂದ 20 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.