ಹಿರಿಯೂರು ಕಾಂಗ್ರೆಸ್  ಶಾಸಕ ಡಿ ಸುಧಾಕರ್ ಎಲೆಕ್ಷನ್ ಗಿಮಿಕ್’ಗಾಗಿ  ತಾಲೂಕಿನ ಎಲ್ಲಾ ಗ್ರಾಮದ ಮಹಿಳೆಯರಿಗೆ ಸೀರೆ ಹಂಚಿಕೆ ಮಾಡಿದ್ದು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಚಿತ್ರದುರ್ಗ (ಮಾ. 24):  ಹಿರಿಯೂರು ಕಾಂಗ್ರೆಸ್ ಶಾಸಕ ಡಿ ಸುಧಾಕರ್ ಎಲೆಕ್ಷನ್ ಗಿಮಿಕ್’ಗಾಗಿ ತಾಲೂಕಿನ ಎಲ್ಲಾ ಗ್ರಾಮದ ಮಹಿಳೆಯರಿಗೆ ಸೀರೆ ಹಂಚಿಕೆ ಮಾಡಿದ್ದು ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೀರೆ ಹಂಚಿಕೆಗೆ ಆಲೂರು ಗ್ರಾಮದ ಮತ್ತು ಪಿಟ್ಲಾಲಿ ಗ್ರಾಮದ ಜನರಿಂದ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

Add Asianetnews Kannada as a Preferred SourcegooglePreferred

ಹಿರಿಯೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ಡಿ.ಸುಧಾಕರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ವಿತರಿಸಿದ್ದ ಸೀರೆ ಮತ್ತಿತರೆ ವಸ್ತುಗಳಿಗೆ ಬೆಂಕಿಯಿಟ್ಟು ಶಾಸಕ ಸುಧಾಕರ ಭಾವಚಿತ್ರದ ಬ್ಯಾಗ್ ಸಮೇತ ಸುಟ್ಟ ಬೆಂಕಿಯಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.