ಗಾಂಧಿ ಕೊಂದ ಗೂಡ್ಸೆ ಪರ ನಿಂತ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ
ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದ್ದ ನಾತೂ ರಾಮ್ ಗೋಡ್ಸೆ ಪರ ಹಿಂದೂ ಮಹಾಸಭಾ ಬ್ಯಾಟಿಂಗ್ ಮಾಡಿದೆ.
ಮಂಗಳೂರು : ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದ್ದ ನಾತೂ ರಾಮ್ ಗೋಡ್ಸೆ ಪರ ಹಿಂದೂ ಮಹಾಸಭಾ ಬ್ಯಾಟಿಂಗ್ ಮಾಡಿದೆ.
ಮಂಗಳೂರಿನಲ್ಲಿ ಮಾತನಾಡಿದ ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯರಾಜು, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಅಂದು ಗಾಂಧೀಜಿಯ ಹತ್ಯೆ ಅನಿವಾರ್ಯವಾಗಿತ್ತು ಅಂತ ಸುಬ್ರಹ್ಮಣ್ಯರಾಜು ಹೇಳಿದ್ದಾರೆ.
ಗಾಂಧೀಜಿ ಪಾಕ್ ಮುಸಲ್ಮಾನರಿಗೆ ಪೂರಕವಾದ ನಿಲುವು ತೆಗೆದುಕೊಳ್ಳುತ್ತಿದ್ದರು. ಹೀಗಾಗಿ ಗಾಂಧಿಯಿಂದ ದೇಶಕ್ಕೆ ಮತ್ತು ಹಿಂದೂ ಸಮಾಜಕ್ಕೆ ಅಪಾಯವಿತ್ತು. ದೇಶಕ್ಕೆ ಕಂಟಕವಾಗುವ ವ್ಯಕ್ತಿಗಳನ್ನು ಮಟ್ಟ ಹಾಕೋದು ನಮ್ಮ ಕಾನೂನು. ಈ ಹಿನ್ನೆಲೆಯಲ್ಲಿ ಗೋಡ್ಸೆ ಗಾಂಧೀಜಿಯನ್ನು ಹತ್ಯೆ ಮಾಡಿದ್ದಾರೆ ಎಂದು ಸರ್ಮರ್ಥನೆ ನೀಡಿದ್ದಾರೆ.
ಇನ್ನು ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯರಾಜು ಹೇಳಿಕೆ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.