ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ. ಮಾಜಿ ಸಚಿವ ಎಚ್​.ಡಿ. ರೇವಣ್ಣ  ಸಾಮಾನ್ಯ ಜನರಂತೆ 300 ರೂಪಾಯಿ ಟಿಕೆಟ್ ಪಡೆದು ಸಾಲಿನಲ್ಲಿ ನಿಂತು ಹಾಸನಾಂಬೆ ದರ್ಶನ ಪಡೆದರು. ದೇವಾಲಯದಲ್ಲಿ 1 ಗಂಟೆಗೂ ಹೆಚ್ಚು ಕಾಲ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.

ಹಾಸನ(ಅ.21): ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ. ಮಾಜಿ ಸಚಿವ ಎಚ್​.ಡಿ. ರೇವಣ್ಣ ಸಾಮಾನ್ಯ ಜನರಂತೆ 300 ರೂಪಾಯಿ ಟಿಕೆಟ್ ಪಡೆದು ಸಾಲಿನಲ್ಲಿ ನಿಂತು ಹಾಸನಾಂಬೆ ದರ್ಶನ ಪಡೆದರು. ದೇವಾಲಯದಲ್ಲಿ 1 ಗಂಟೆಗೂ ಹೆಚ್ಚು ಕಾಲ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.

ದರ್ಶನದ ನಂತರ ಮಾತಾಡಿದ ಮಾಜಿ ಸಚಿವ ಎಚ್​.ಡಿ. ರೇವಣ್ಣ. ವಿಐಪಿಗಳ ಪಾಸ್'​​​​ಗಳಿಗೆ ದಿನಾಂಕ ನಿಗದಿಗೆ ರೇವಣ್ಣ ಆಕ್ಷೇಪ ವ್ಯಕ್ತಪಡಿಸಿದ್ರು. ನಿಗದಿತ ದಿನಾಂಕದಂದೇ ದರ್ಶನಕ್ಕೆ ಬರಬೇಕೆಂಬ ನಿಯಮ, ಜನಪ್ರತಿನಿಧಿಗಳಿಗೆ ರೂಪಿಸಿರುವ ಜಿಲ್ಲಾಡಳಿತ ನಿಯಮದ ವಿರುದ್ಧ ಎಚ್​.ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.