ಸಭೆ ನಡುವೆಯೇ ಪುತ್ರ ರೇವಣ್ಣಗೆ ತಂದೆ ದೇವೇಗೌಡರ ಫುಲ್ ಕ್ಲಾಸ್
ಇಷ್ಟು ದಿನ ಲೋಕೋಪಯೋಗಿ ಸಚಿವ ಎಚ್.ಡೊ.ರೇವಣ್ಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಆದರೆ ಈಗ ರೇವಣ್ಣ ಅವರೇ ತರಾಟೆಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ರೇವಣ್ಣ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು ಮಾಜಿ ಮಾಜಿ ಪ್ರಧಾನಿ.
ಬೆಂಗಳೂರು[ಜ.11] ಸಭೆ ನಡೆಯುತ್ತಿದ್ದ ವೇಳೆ ಅಧಿಕಾರಿಗಳ ಜೊತೆ ಮಾತನಾಡುತ್ತಿದ್ದ ಪುತ್ರ ರೇವಣ್ಣಗೆ ತಂದೆ ದೇವೇಗೌಡರೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಪುತ್ರ ರೇವಣ್ಣ ಹಾಗೂ ಅಧಿಕಾರಿಗಳನ್ನು ಏರು ದನಿಯಲ್ಲಿ ಗೌಡರೆ ಗದರಿಸಿದ್ದಾರೆ.
ಹಾಸನದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ವೇಳೆ ಘಟನೆ ನಡೆದಿದ್ದು ಸಭೆಯಲ್ಲಿ ಭಾಗಿಯಾಗಿ ಹೊರಹೋಗುವಾಗ ಅಧಿಕಾರಿಗಳ ಜೊತೆ ರೇವಣ್ಣ ಮಾತನಾಡುತ್ತಿದ್ದರು.
ದೇವೇಗೌಡರು, ಎಚ್ಡಿಕೆ ಕಣ್ಣೀರಿನ ಗುಟ್ಟು ರಟ್ಟು ಮಾಡಿದ ರೇವಣ್ಣ
‘ಏಯ್ ಯಾರ್ರೀ ಅದು ರೇವಣ್ಣ ಜೊತೆ ಮಾತನಾಡೊದಾದ್ರೆ ಪಕ್ಕಕ್ಕೆ ಹೋಗಿ, ರೇವಣ್ಣ ಮಾತನಾಡೋದಾದ್ರೆ ಇಲ್ಲಿಗೆ ಬರಲಿ ಇಲ್ಲಾ ಹೊರ ಹೋಗಿ ಎಂದು ಮಾಜಿ ಪ್ರಧಾನಿ ಗದರಿದರು.