ಮಕಾಡೆ ಮಲಗಿತು ಸರ್ದಾರ್ ಪ್ರತಿಮೆ ಬಳಿ ಇದ್ದ ಡೈನಾಸರ್ ಮೂರ್ತಿ| ನೆಲ ಕಚ್ಚಿತು 30 ಅಡಿ ಎತ್ತರದ ಮೂರ್ತಿ| ಪ್ರವಾಸಿಗರನ್ನು ಸೆಳೆಯಲು ನಿರ್ಮಿಸಿದ್ದ ಮೂರ್ತಿ

ಗಾಂಧೀನಗರ[ಸೆ.11]: ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಸರ್ದಾರ್ ವಲ್ಲಭಬಾಯಿಯವರ ಏಕತಾ ಪ್ರತಿಮೆ ಬಳಿ 30 ಅಡಿ ಎತ್ತರದ ಒಂದು ಡೈನಾಸರ್ ಮೂರ್ತಿಯೊಂದನ್ನೂ ನಿರ್ಮಿಸಲಾಗಿತ್ತು. ಬರೋಬ್ಬರಿ 2 ಕೋಟಿ ವ್ಯಯಿಸಿ ನಿರ್ಮಿಸಲಾಗಿದ್ದ ಮೂರ್ತಿ ಮಾತ್ರ ಸೆಪ್ಟೆಂಬರ್ 8ರಂದು ಮಕಾಡೆ ಮಲಗಿದೆ.

Add Asianetnews Kannada as a Preferred SourcegooglePreferred

ಹೌದು ಇಲ್ಲಿನ ಸಾಧು ಪಹಾಡಿಯಲ್ಲಿರುವ ನರ್ಮದಾ ನದಿ ತಟದಲ್ಲಿ ನಿರ್ಮಿಸಲಾಗಿದ್ದ ಏಕತ ಪ್ರತಿಮೆಯೊಂದಿಗೆ, ಪ್ರವಾಸಿಗರನ್ನು ಸೆಳೆಯುವ ಸಲುವಾಗಿ ಗುಜರಾತ್ ಸರ್ಕಾರ ಇನ್ನೂ ಹಲವು ಕಲಾಕೃತಿಗಳನ್ನು ನಿರ್ಮಿಸಿತ್ತು. ಇವುಗಳಲ್ಲಿ ಡೈನಾಸರ್ ಮೂರ್ತಿಯೂ ಒಂದು. ಇದನ್ನು ನಿರ್ಮಿಸಲು ಬರೋಬ್ಬರಿ 1 ತಿಂಗಳು ತಗುಲಿತ್ತು. ಆದರೀಗ ಇದೆಲ್ಲವೂ ವೇಸ್ಟ್ ಆಗಿದೆ.

Scroll to load tweet…

ದೃಷ್ಟವಶಾತ್ ಮೂರ್ತಿ ಬಿದ್ದಾಗ ಆ ಸ್ಥಳದಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಇನ್ನು ಸರ್ಕಾರ ಇಲ್ಲಿ ಒಂದು ಮ್ಯೂಸಿಯಂ ಹಾಗೂ ಉದ್ಯಾನವನವನ್ನೂ ನಿರ್ಮಿಸಿದೆ ಎಂಬುವುದು ಉಲ್ಲೇಖನೀಯ. ಈ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರನ್ನು ಸೆಳೆಯುವುದು ಸರ್ಕಾರ ಉದ್ದೇಶವಾಗಿದೆ.