ಮೋಜು ಮಸ್ತಿ ಮಾಡಲು ಹಣಕ್ಕಾಗಿ ಸ್ವಂತ ಅಜ್ಜಿ- ಅಜ್ಜರನ್ನೇ ಹತ್ಯೆ ಮಾಡಿದ ಮೊಮ್ಮಗನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು (ನ.29): ಮೋಜು ಮಸ್ತಿ ಮಾಡಲು ಹಣಕ್ಕಾಗಿ ಸ್ವಂತ ಅಜ್ಜಿ- ಅಜ್ಜರನ್ನೇ ಹತ್ಯೆ ಮಾಡಿದ ಮೊಮ್ಮಗನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ಎಚ್ಎಎಲ್ ಬಳಿ ಅಶ್ವಥನಗರಲ್ಲಿ ನಿನ್ನೆ ಬೆಳಕಿಗೆ ಬಂದಿದ್ದ ವೃದ್ಧ ದಂಪತಿ ಕೊಲೆಯನ್ನು ಪೊಲೀಸರು ಭೇದಿಸಿದ್ದು, ಪ್ರಮುಖ ಆರೋಪಿ ಮೃತರ ಮೊಮ್ಮಗ. ಮೃತ ಗೋವಿಂದನ್, ಸರೋಜಾ ಅವರ ಮೊಮ್ಮಗ ಪ್ರಮೋದ್, ಆತನ ಸ್ನೇಹಿತರಾದ ಪ್ರವೀಣ್, ಹಸನ್ ಬಾಷಾ ಸೇರಿ ಕೊಲೆ ಮಾಡಿದ್ದಾರೆ. ಭಾನುವಾರ ಮಧ್ಯಾಹ್ಮ ಪ್ರಮೋದ ಅಜ್ಜಿ ದೊಣ್ಣೆಯಿಂದ ಹಲ್ಲೆಗೈದು, ತಾತನನ್ನು ಕೊಲೆ ಮಾಡಿದ್ದ. ನಂತರ ಪ್ರಕರಣದಿಂದ ಬಚಾವಾಗಲೂ ಗ್ಯಾಸ್ ಸಿಲಿಂಡರ್ ಲೀಕ್ ಮಾಡಿ, ಮನೆಯನ್ನು ಬೆಂಕಿಗಾಹುತಿ ಮಾಡಲು ಪ್ಲಾನ್ ಮಾಡಿದ್ದರು. ಆದರೆ ಆರೋಪಿಗಳ ಪ್ಲಾನ್ ಉಲ್ಟಾ ಹೊಡೆದಿದ್ದು, ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇಂದು ಮಧ್ಯಾಹ್ನ ಯಮಲೂರು ಸಮೀಪ ಹಸನ್ ಬಾಷಾ ಬಂಧಿಸುವಾಗ ಪೊಲೀಸರ ಮೇಲೆಯೇ ಹಲ್ಲೆ ನಡೆದಿದ್ದು, ಆತ್ಮರಕ್ಷಣೆಗೆ ಪಿಎಸ್ಐ ಪ್ರಶೀಲಾ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಘಟನೆ ವೇಳೆ ಪೇದೆ ರವಿಗೆ ಗಾಯವಾಗಿದೆ.
