ರಾಜ್ಯದ ವಿವಿಧ ಜಿಲ್ಲೆಗಳು ಸೇರಿ ಮಹಾರಾಷ್ಟ್ರದ ಪುಣೆ, ಕೊಲ್ಹಾಪುರದಲ್ಲಿ ಹಂತಕರಿಗಾಗಿ ಎಸ್'​ಐಟಿ ಶೋಧ ನಡೆಸುತ್ತಿದೆ. ರೌಡಿ ಚಟುವಟಿಕೆ ಹಿನ್ನಲೆಯುಳ್ಳವರ ವಿಚಾರಣೆ ನಡೆಸಿದೆ. ಗೌರಿ ಕುಟುಂಬದವರು, ಸ್ನೇಹಿತರು, ಕಚೇರಿ ಸಿಬ್ಬಂದಿ, ಹೇಳಿಕೆ ಪಡೆದಿರುವ ಶೀಘ್ರದಲ್ಲಿ ಹಂತಕರನ್ನು ಬಂಧಿಸಲಾಗುವುದು ಎಂದು ತಿಳಿಸಿದೆ.

ಬೆಂಗಳೂರು(ನ.05): ಬೆಂಗಳೂರಿನಲ್ಲಿ ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದು ಇಂದಿಗೆ 2 ತಿಂಗಳಾಗಿದ್ದು, ಎಸ್'ಐಟಿ ಗೌರಿ ಲಂಕೇಶ್ ಹಂತಕರ ಸ್ಪಷ್ಟ ಸುಳಿವು ದೊರಕಿದೆ.

Add Asianetnews Kannada as a Preferred SourcegooglePreferred

ಕಳೆದ ಎರಡು ತಿಂಗಳಿಂದ ಹಂತಕರ ಬೆನ್ನು ಬಿದ್ದಿರುವ ಎಸ್'ಐಟಿ ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದೆ. ಸ್ಪಷ್ಟ ಸುಳಿವಿನ ಮೇಲೆ ಹಂತಕರಿಗಾಗಿ ಹುಡುಕಾಟ ನಡೆಸುತ್ತಿರುವ ಎಸ್'ಐಟಿ ಶೀಘ್ರದಲ್ಲೇ ಹಂತಕರನ್ನ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದೆ.

ರಾಜ್ಯದ ವಿವಿಧ ಜಿಲ್ಲೆಗಳು ಸೇರಿ ಮಹಾರಾಷ್ಟ್ರದ ಪುಣೆ, ಕೊಲ್ಹಾಪುರದಲ್ಲಿ ಹಂತಕರಿಗಾಗಿ ಎಸ್'​ಐಟಿ ಶೋಧ ನಡೆಸುತ್ತಿದೆ. ರೌಡಿ ಚಟುವಟಿಕೆ ಹಿನ್ನಲೆಯುಳ್ಳವರ ವಿಚಾರಣೆ ನಡೆಸಿದೆ. ಗೌರಿ ಕುಟುಂಬದವರು, ಸ್ನೇಹಿತರು, ಕಚೇರಿ ಸಿಬ್ಬಂದಿ, ಹೇಳಿಕೆ ಪಡೆದಿರುವ ಶೀಘ್ರದಲ್ಲಿ ಹಂತಕರನ್ನು ಬಂಧಿಸಲಾಗುವುದು ಎಂದು ತಿಳಿಸಿದೆ.