Asianet Suvarna News Asianet Suvarna News

ಪರಪ್ಪನ ಅಗ್ರಹಾರ ಅವ್ಯವಹಾರ ವರದಿ ಅಂಗೀಕಾರ; ಭ್ರಷ್ಟಾಚಾರ ಬಯಲಿಗೆಳೆದವರ ವಿರುದ್ಧವೇ ತನಿಖೆಗೆ ಆದೇಶ

ಪರಪ್ಪನ ಅಗ್ರಹಾರ ಜೈಲು ಅಕ್ರಮ ವರದಿಯನ್ನು  ಅಂಗೀಕಾರ ಮಾಡಲಾಗಿದೆ. ಭ್ರಷ್ಟಾಚಾರ ಬಯಲಿಗೆಳೆದ ಡಿ. ರೂಪಾ ವಿರುದ್ಧವೇ ತನಿಖೆಗೆ ಆದೇಶ ನೀಡಲಾಗಿದೆ. 
ಅಂದಿನ ಡಿಜಿಪಿ ಸತ್ಯನಾರಾಯಣರಾವ್‌ ವಿರುದ್ಧ ರೂಪಾ ಆರೋಪ ಮಾಡಿದ್ದರು. 

Govt Ordered to inquiry on DIG Roopa

ಬೆಂಗಳೂರು (ಮಾ. 01): ಪರಪ್ಪನ ಅಗ್ರಹಾರ ಜೈಲು ಅಕ್ರಮ ವರದಿಯನ್ನು  ಅಂಗೀಕಾರ ಮಾಡಲಾಗಿದೆ. ಭ್ರಷ್ಟಾಚಾರ ಬಯಲಿಗೆಳೆದ ಡಿ. ರೂಪಾ ವಿರುದ್ಧವೇ ತನಿಖೆಗೆ ಆದೇಶ ನೀಡಲಾಗಿದೆ. 
ಅಂದಿನ ಡಿಜಿಪಿ ಸತ್ಯನಾರಾಯಣರಾವ್‌ ವಿರುದ್ಧ ರೂಪಾ ಆರೋಪ ಮಾಡಿದ್ದರು. 

ಎಐಎಡಿಎಂಕೆ ನಾಯಕಿ ಶಶಿಕಲಾಗೆ ಜೈಲಿನಲ್ಲಿ ಐಷಾರಾಮಿ ವ್ಯವಸ್ಥೆ ನೀಡಲು ಲಂಚ 2 ಕೋಟಿ ರೂ ಲಂಚ ಪಡೆಯಲಾಗಿದೆ ಎಂದು ವರದಿ ಡಿ.ರೂಪಾ ವರದಿ ನೀಡಿದ್ದರು.  ಆದರೆ ರೂಪಾ ವರದಿಯನ್ನು ಅಂದಿನ ಕಾರಾಗೃಹ ಡಿಜಿಪಿ ಸತ್ಯನಾರಾಯಣರಾವ್ ತಳ್ಳಿ ಹಾಕಿದ್ದರು.  ಇಬ್ಬರ ನಡುವಿನ ಜಟಾಪಟಿ ನಡೆದಿತ್ತು.  ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆ ನಡೆಸುವಂತೆ ಸರ್ಕಾರ ಆದೇಶ ನೀಡಿತ್ತು.  ನಿವೃತ್ತ ಐಎಎಸ್​ ಅಧಿಕಾರಿ ವಿಜಯ್​​ಕುಮಾರ್ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಈ ತನಿಖಾ ವರದಿಯನ್ನು ಅಂಗೀಕಾರ ಮಾಡಲಾಗಿದೆ. ಡಿ. ರೂಪಾ, ನಿವೃತ್ತ ಡಿಜಿಪಿ ಸತ್ಯನಾರಾಯಣರಾವ್ ವಿರುದ್ಧ ಡಿಪಿಎಆರ್ ಮೂಲಕ ತನಿಖೆ ನಡೆಸಲು ಸರ್ಕಾರ ಆದೇಶಿಸಿದೆ. ಸೂಪರಿಟೆಂಡೆಂಟ್ ಕೃಷ್ಣ ಕುಮಾರ್, ಡೆಪ್ಯುಟಿ ಸೂಪರಿಟೆಂಡೆಂಟ್ ಅನಿತಾ ವಿರುದ್ಧವೂ ತನಿಖೆ ನಡೆಯಬೇಕೆಂದು ಆದೇಶಿಸಿದೆ.  

Follow Us:
Download App:
  • android
  • ios