Asianet Suvarna News Asianet Suvarna News

ಚರ್ಚೆಯಾಗದೇ ಅಂಗೀಕಾರವಾಗಿದ್ದ ಸರ್ಕಾರದ ಮಹತ್ವದ ವಿಧೇಯಕ ತಿರಸ್ಕರಿಸಿದ ರಾಜ್ಯಪಾಲ

Governor Of Karnataka Not approved The Real Estate Bill

ಬೆಂಗಳೂರು(ಅ.04): ಕಾಂಗ್ರೆಸ್ ಸರ್ಕಾರಕ್ಕೆ ರಾಜ್ಯಪಾಲರು ಮತ್ತೊಮ್ಮೆ ಟಾಂಗ್ ಕೊಟ್ಟಿದ್ದಾರೆ. ರಾಜ್ಯ ಸರ್ಕಾರದ ಮಹತ್ವದ ರಿಯಲ್ ಎಸ್ಟೇಟ್ ವಿಧೇಯಕವನ್ನು ರಾಜ್ಯಪಾಲರು ತಿರಸ್ಕರಿಸಿದ್ದಾರೆ.

ನಗರಾಭಿವೃದ್ಧಿ ಪ್ರಾಧಿಕಾರಗಳ ತಿದ್ದುಪಡಿ ವಿಧೇಯಕ-2016ರ ಬಿಲ್​​ಗೆ ಅಂಕಿತ ಹಾಕಿಲ್ಲ. ಬಿಲ್ ತಿರಸ್ಕಾರದಿಂದ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗ ಆಗಿದೆ. ಯಾವುದೇ ಚರ್ಚೆಯಾಗದೇ ಅಂಗೀಕಾರವಾಗಿದ್ದ ಈ  ವಿಧೇಯಕಕ್ಕೆ ಅಂಕಿತ ಹಾಕಬಾರದು, ಇದು ರಿಯಲ್ ಎಸ್ಟೇಟ್ ಉದ್ದಿಮೆ ಪರ ಬಿಲ್ ಅಂತ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಆರೋಪಿಸಿದ್ದರು. ಜೊತೆಗೆ ರಾಜ್ಯಪಾಲರಿಗೂ ಶೆಟ್ಟರ್​ ಪತ್ರ ಬರೆದಿದ್ದರು.

ಬಿಲ್ ಜಾರಿಯಾದರೆ ಪರಿಸರಕ್ಕೆ ಕೊಡಲಿಯೇಟು ಬೀಳುತ್ತದೆ ಎಂದೂ ಶೆಟ್ಟರ್​​ ಪತ್ರದಲ್ಲಿ ವಿವರಿಸಿದ್ದರು.

Latest Videos
Follow Us:
Download App:
  • android
  • ios