Asianet Suvarna News Asianet Suvarna News

ಸರ್ಕಾರಿ ಬಸ್ ಧಗಧಗ: ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ವೃದ್ಧೆ ಸಜೀವ ದಹನ

ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ಗೆ  ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ವೃದ್ಧೆ ಪ್ರಯಾಣಿಕರೊಬ್ಬರು ಸಜೀವ ದಹನವಾಗಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಬಳಿಯ ಅರಿಶೀನಕುಂಟೆ ಸಮೀಪ ಸಂಭವಿಸಿದೆ. ದಾಸರಹಳ್ಳಿ ಮೂಲದ ಭಾಗ್ಯಮ್ಮ ಮೃತ ದುರ್ಧೈವಿ.

GOVERNMENT BUS CAUGHT FIRE

ಬೆಂಗಳೂರು(ಫೆ.21): ಚಲಿಸುತ್ತಿದ್ದ ಕೆಎಸ್​ಆರ್​ಟಿಸಿ ಬಸ್​ ಗೆ  ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ವೃದ್ಧೆ ಪ್ರಯಾಣಿಕರೊಬ್ಬರು ಸಜೀವ ದಹನವಾಗಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಬಳಿಯ ಅರಿಶೀನಕುಂಟೆ ಸಮೀಪ ಸಂಭವಿಸಿದೆ. ದಾಸರಹಳ್ಳಿ ಮೂಲದ ಭಾಗ್ಯಮ್ಮ ಮೃತ ದುರ್ಧೈವಿ.

ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ KA 18F-640 ನಂಬರ್​​​ನ ಕೆಎಸ್​​ಆರ್​ಟಿಸಿ ಬಸ್​​ ರಾತ್ರಿ 12 ಗಂಟೆ ಸುಮಾರಿಗೆ ​​ಅರೀಶಿನಕುಂಟೆ ಬಳಿ ಬರುತ್ತಿದ್ದಾಗ ಇಂಜಿನ್​​ನಲ್ಲಿ ಬೆಂಕಿ ಕಾಣಿಸುತ್ತಿಕೊಂಡಿದೆ. ಕೂಡಲೇ ಚಾಲಕ ಬಸ್'ನ್ನು ನಿಲ್ಲಿಸಿದನಾದರೂ, ಎಲ್ಲಾ ಪ್ರಾಯಾಣಿಕರು ಬಸ್ ನಿಂದ ಇಳಿಯಲು ಸಾಧ್ಯವಾಗಲಿಲ್ಲ. ಪರಿಣಾಮ ಬಸ್​'ನಲ್ಲಿ ಪ್ರಯಾಣ ಮಾಡುತ್ತಿದ್ದ 50 ಜನರ ಪೈಕಿ ಭಾಗ್ಯಮ್ಮ ಎಂಬಾ ವೃದ್ಧೆ ಬಸ್'​​ನಲ್ಲಿ ಸಜೀವ ದಹನವಾಗಿದ್ದು, 9 ಮಂದಿಗೆ ಗಂಭೀರ ಸುಟ್ಟ ಗಾಯಗಳಾಗಿವೆ.

ಗಂಭೀರ ಗಾಯಗೊಂಡಿರುವ ಗಾಯಳುಗಳಿಗೆ ನೆಲಮಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ  ಕೊಡಿಸಲಾಗುತ್ತಿದ್ದೆ. ಈ ಸಂಬಂಧ ನೆಲಮಂಗಲ ಗ್ರಾಮಂತರ ಪೊಲೀಸ್​​ ಠಾಣೆಯಲ್ಲಿ ​ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

 

Follow Us:
Download App:
  • android
  • ios