ಸರ್ಕಾರಿ ಬಸ್ ಧಗಧಗ: ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ವೃದ್ಧೆ ಸಜೀವ ದಹನ
ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ವೃದ್ಧೆ ಪ್ರಯಾಣಿಕರೊಬ್ಬರು ಸಜೀವ ದಹನವಾಗಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಬಳಿಯ ಅರಿಶೀನಕುಂಟೆ ಸಮೀಪ ಸಂಭವಿಸಿದೆ. ದಾಸರಹಳ್ಳಿ ಮೂಲದ ಭಾಗ್ಯಮ್ಮ ಮೃತ ದುರ್ಧೈವಿ.
ಬೆಂಗಳೂರು(ಫೆ.21): ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ ಗೆ ಆಕಸ್ಮಿಕ ಬೆಂಕಿ ಹೊತ್ತಿಕೊಂಡ ಪರಿಣಾಮ ವೃದ್ಧೆ ಪ್ರಯಾಣಿಕರೊಬ್ಬರು ಸಜೀವ ದಹನವಾಗಿರುವ ಘಟನೆ ಬೆಂಗಳೂರು ಹೊರವಲಯದ ನೆಲಮಂಗಲ ಬಳಿಯ ಅರಿಶೀನಕುಂಟೆ ಸಮೀಪ ಸಂಭವಿಸಿದೆ. ದಾಸರಹಳ್ಳಿ ಮೂಲದ ಭಾಗ್ಯಮ್ಮ ಮೃತ ದುರ್ಧೈವಿ.
ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬರುತ್ತಿದ್ದ KA 18F-640 ನಂಬರ್ನ ಕೆಎಸ್ಆರ್ಟಿಸಿ ಬಸ್ ರಾತ್ರಿ 12 ಗಂಟೆ ಸುಮಾರಿಗೆ ಅರೀಶಿನಕುಂಟೆ ಬಳಿ ಬರುತ್ತಿದ್ದಾಗ ಇಂಜಿನ್ನಲ್ಲಿ ಬೆಂಕಿ ಕಾಣಿಸುತ್ತಿಕೊಂಡಿದೆ. ಕೂಡಲೇ ಚಾಲಕ ಬಸ್'ನ್ನು ನಿಲ್ಲಿಸಿದನಾದರೂ, ಎಲ್ಲಾ ಪ್ರಾಯಾಣಿಕರು ಬಸ್ ನಿಂದ ಇಳಿಯಲು ಸಾಧ್ಯವಾಗಲಿಲ್ಲ. ಪರಿಣಾಮ ಬಸ್'ನಲ್ಲಿ ಪ್ರಯಾಣ ಮಾಡುತ್ತಿದ್ದ 50 ಜನರ ಪೈಕಿ ಭಾಗ್ಯಮ್ಮ ಎಂಬಾ ವೃದ್ಧೆ ಬಸ್'ನಲ್ಲಿ ಸಜೀವ ದಹನವಾಗಿದ್ದು, 9 ಮಂದಿಗೆ ಗಂಭೀರ ಸುಟ್ಟ ಗಾಯಗಳಾಗಿವೆ.
ಗಂಭೀರ ಗಾಯಗೊಂಡಿರುವ ಗಾಯಳುಗಳಿಗೆ ನೆಲಮಂಗಲದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದೆ. ಈ ಸಂಬಂಧ ನೆಲಮಂಗಲ ಗ್ರಾಮಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.