ಗೋವಾ ಸಿಎಂಗೆ ಅನಾರೋಗ್ಯ : ನಾಯಕತ್ವ ಬದಲಾವಣೆ?
ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ಅವರು ಅನಾರೋಗ್ಯಕ್ಕೆ ತುತ್ತಾದ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆಗೆ ಬಿಜೆಪಿಯಲ್ಲೇ ಕೂಗು ಕೇಳಿ ಬರುತ್ತಿದೆ.
ಪಣಜಿ: ಮುಖ್ಯಮಂತ್ರಿ ಮನೋಹರ ಪರ್ರಿಕರ್ ಅವರು ಪುನಃ ಅನಾರೋಗ್ಯಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಅವರು ಪದತ್ಯಾಗ ಮಾಡಬೇಕೆಂಬ ಕೂಗು ಗೋವಾ ಬಿಜೆಪಿಯಲ್ಲಿ ಎದ್ದಿದೆ.
‘ಆಡಳಿತ ಹಾಗೂ ಅವರ ವೈಯಕ್ತಿಕ ಹಿತದೃಷ್ಟಿಯಿಂದ ಪರ್ರಿಕರ್ ಅಧಿಕಾರ ಬಿಟ್ಟು ಕೊಡುವತ್ತ ಆಲೋಚಿಸಬೇಕು. ಆದರೆ ಅಂತಿಮ ನಿರ್ಧಾರ ಅವರಿಗೆ ಬಿಟ್ಟಿದ್ದು. ಈ ಬಗ್ಗೆ ಬಿಜೆಪಿ ನಾಯಕತ್ವದೊಂದಿಗೆ ಸಮಾ ಲೋಚಿಸುತ್ತೇನೆ’ ಎಂದು ಕೇಂದ್ರ ಸಚಿವ ಶ್ರೀಪಾದ ನಾಯಕ್ ಹೇಳಿದ್ದಾರೆ.
ಅಲ್ಲದೆ, ‘ಬಿಜೆಪಿ ವರಿಷ್ಠರು ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ’ ಎಂದೂ ನಾಯಕ್ ತಿಳಿಸಿದ್ದಾರೆ. ಆದರೆ ನಾಯಕ್ ಹೇಳಿಕೆಯನ್ನು ಗೋವಾ ಸಿಎಂ ಕಚೇರಿ ನಿರಾಕರಿಸಿದೆ.