ಕನ್ನಡಿಗರಿಗೆ ಗುಡ್ ನ್ಯೂಸ್ ನೀಡಿದ ಗೋವಾ ಸಿಎಂ
ಗೋವಾ ಮುಖ್ಯಮಂತ್ರಿ ಕನ್ನಡಿಗರಿಗೆ ಶುಭ ಸುದ್ದಿಯೊಂದನ್ನು ನೀಡಿದ್ದಾರೆ. ಸಿಎಂ ಪ್ರಮೋದ್ ಸಾವಂತ್ ನೀಡಿದ ಆ ಗುಡ್ ನ್ಯೂಸ್ ಏನು..?
ಬೆಳಗಾವಿ [ಜೂ.15] : ಕಳೆದ 15 ವರ್ಷಗಳಿಂದ ಗೋವಾ ರಾಜ್ಯದ ಕನ್ನಡಿಗರನ್ನು ಸಂಘಟಿಸುವಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪ್ರಮುಖ ಪಾತ್ರವಹಿಸಿದ್ದಾರೆ.
ಗೋವಾದಲ್ಲಿ ಕನ್ನಡ ಭವನ ನಿರ್ಮಿಸುವುದಾದರೆ ಗೋವಾ ಸರ್ಕಾರದಿಂದ 2 ಎಕರೆ ಜಾಗ ನೀಡುವುದಾಗಿ ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ ಹೇಳಿದರು.
ಗೋವಾದ ಬಿಚ್ಚೋಲಿಯಲ್ಲಿ ಭಾನುವಾರ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಈ ಭರವಸೆ ನೀಡಿದರು.