ಬೆಂಗಳೂರು: ಪೋಷಕರು ಬೇರೊಬ್ಬರೊಂದಿಗೆ ವಿವಾಹ ಮಾಡುತ್ತಾರೆಂದು ಆತಂಕ​ಗೊಂಡು ಪ್ರಿಯಕರನೊಂದಿಗೆ ಪರಾರಿ​ಯಾ​ಗಿದ್ದ ಅಪ್ರಾಪ್ತೆ ಬಳಿಕ ಸಮಸ್ಯೆ​ಯಿಂದ ಪಾರಾಗಲು ತನ್ನನ್ನು ಅಪ​​ಹ​ರಿಸಿ​ದ್ದಾಗ್ಯೂ, ತನ್ನ ಮೇಲೆ ಅತ್ಯಾಚಾರ ನಡೆದಿರುವುದಾಗಿಯೂ ಸುಳ್ಳು ಹೇಳಿ ಕೊನೆಗೆ ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾಳೆ.

ಪೋಷಕರ ದೂರಿ​ನ ಹಿನ್ನೆಲೆಯಲ್ಲಿ ಪೊಲೀಸರು ಗುಡ್ಡದ​ಹಳ್ಳಿಯ ಫರ್ಖಾನ್‌ ಅಹ್ಮದ್‌ (18) ಹಾಗೂ ಆತನ ಸ್ನೇಹಿತ ಸಂದೀಪ್‌ (18) ಎಂಬಾತನ ಅಪಹರಣದ ಆರೋಪ­ ದಡಿ ಬಂಧಿಸಿದ್ದು, ಜೈಲಿಗೆ ಕಳುಹಿಸಿದ್ದಾರೆ.

ಫರ್ಖಾನ್‌ ಹಾಗೂ ಬಾಲಕಿ ಚಾಮ​ರಾಜಪೇಟೆಯ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದು, ಪರಸ್ಪರ ಪ್ರೀತಿ­ಸು­ತ್ತಿದ್ದರು. ಫರ್ಖಾನ್‌ ಅನ್ಯ ಧರ್ಮೀ­ಯನೆಂಬ ಕಾರಣಕ್ಕೆ ಬಾಲಕಿ ಮನೆ­ಯವರು ಮದುವೆಗೆ ನಿರಾಕರಿಸಿದ್ದರು. ಇದ​ರಿಂದ ಗೊಂದಲಕ್ಕೀಡಾದ ಬಾಲಕಿ, ಮನೆಯಿಂದ ಪರಾರಿಯಾಗಿದ್ದಳು. ಈ ಸಂಬಂಧ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಬಾಲಕಿ ತಾಯಿಗೆ ಆರೋಗ್ಯ ಹದಗೆಟ್ಟಿದೆ ಎಂದು ಪೊಲೀಸರು ಕಳುಹಿಸಿದ ಸಂದೇಶ ಓದಿದ ನಂತರ ಮನೆಗೆ ಬಂದ ಬಾಲಕಿ, ಪೋಷಕರಿಂದ ತಪ್ಪಿಸಿಕೊಳ್ಳಲು ಸುಳ್ಳಿನ ಕತೆ ಕಟ್ಟಿದ್ದಾಳೆ. ಹೆಚ್ಚಿನ ವಿಚಾರಣೆ ನಡೆಸಿದಾಗ ಸತ್ಯ ಬಯಲಾಗಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

(ಕನ್ನಡಪ್ರಭ ವಾರ್ತೆ)