ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ  ಈ ಬಾರಿ ಗ್ಯಾಸ್​ ಮಾಫಿಯಾದೊಳಗೆ ಲಗ್ಗೆ ಇಟ್ಟು ಅಲ್ಲಿನ ಭ್ರಷ್ಟರ ಬಣ್ಣ ಬಯಲು ಮಾಡಿದೆ. ಈ ಮಾಫಿಯಾ ಜನಸಾಮಾನ್ಯರಿಗೆ ಸಿಗಬೇಕಾದ ಗ್ಯಾಸ್​ ಸಿಲಂಡರನ್ನು ಕಾಳ ಸಂತೆಯಲ್ಲಿ ಮಾರಿ ಕೋಟಿ ಕೋಟಿ ಲೂಟಿ ಹೊಡೆಯೋ ಭ್ರಷ್ಟರ ಮುಖವಾಡ ಕಳಚಿದೆ.

ನಮ್ಮ ನಾಡಿನಲ್ಲಿ ನಡೆಯುತ್ತಿರೋ ಅನೇಕ ಮಾಫಿಯಾಗಳ ಪೈಕಿ ಗ್ಯಾಸ್​ ಮಾಫಿಯಾ ಭಯಾನಕ ರೂಪ ಪಡೀತಿದೆ. ಈ ಮಾಫಿಯಾ ಜನಸಾಮಾನ್ಯರಿಗೆ ಮೋಸ ಮಾಡಿ ಕೋಟಿ ಕೋಟಿ ಲೂಟಿ ಹೊಡೆಯೋದು ಮಾತ್ರವಲ್ಲದೆ, ಜನರ ಪ್ರಾಣವನ್ನೂ ಅಪಾಯದಂಚಿಗೆ ತಳ್ಳುತ್ತಿದೆ. ಅದು ಹೇಗೆ ಅನ್ನೋದನ್ನ ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ ರಹಸ್ಯ ಕಾರ್ಯಾಚರಣೆ ಮೂಲಕ ಪತ್ತೆ ಹಚ್ಚಿದೆ.

ಯಸ್​…ಸುವರ್ಣ ನ್ಯೂಸ್​ನ ಕವರ್​ಸ್ಟೋರಿ ತಂಡ ಈ ಬಾರಿ ಗ್ಯಾಸ್​ ಮಾಫಿಯಾದೊಳಗೆ ಲಗ್ಗೆ ಇಟ್ಟು ಅಲ್ಲಿನ ಭ್ರಷ್ಟರ ಬಣ್ಣ ಬಯಲು ಮಾಡಿದೆ. ಈ ಮಾಫಿಯಾ ಜನಸಾಮಾನ್ಯರಿಗೆ ಸಿಗಬೇಕಾದ ಗ್ಯಾಸ್​ ಸಿಲಂಡರನ್ನು ಕಾಳ ಸಂತೆಯಲ್ಲಿ ಮಾರಿ ಕೋಟಿ ಕೋಟಿ ಲೂಟಿ ಹೊಡೆಯೋ ಭ್ರಷ್ಟರ ಮುಖವಾಡ ಕಳಚಿದೆ.

ಈ ಭ್ರಷ್ಟರು ಗ್ರಾಮೀಣ ಭಾಗದ ಜನರ ದಾಖಲೆಗಳನ್ನು ಪಡೆದು ಅವರಿಗೆ ಗೊತ್ತಿಲ್ಲದ ರೀತಿಯಲ್ಲಿ ಅಕ್ರಮವಾಗಿ ಗ್ಯಾಸ್​ ಸಂಪರ್ಕ ಪಡೆಯುತ್ತಿದ್ದಾರೆ. ಅದನ್ನ ಕಾಳಸಂತೆಯಲ್ಲಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡಿ ಜನರಿಗೆ ಮೋಸ ಮಾಡ್ತಿದ್ದಾರೆ. ಈ ಮಾಫಿಯಾ ಮನೆಬಳಕೆಯ ನೂರಾರು ಗೃಹ ಬಳಕೆಯ ಸಿಲಿಂಡರ್​ ಇಟ್ಟುಕೊಂಡು ಅಕ್ರಮವಾಗಿ ಹೆಚ್ಚಿನ ಹಣಕ್ಕೆ ಆಟೋಗಳಿಗೆ, ಸಿಲಿಂಡರ್​ಗಳಿಗೆ ಗ್ಯಾಸ್​ ರೀಫಿಲ್ಲಿಂಗ್​ ಮಾಡುವ ಕಾಯಕದಲ್ಲೂ ತೊಡಗಿದೆ.

ಈ ರೀಫಿಲ್ಲಿಂಗ್​ ದಂಧೆ ದೂರ ಎಲ್ಲೂ ಅಲ್ಲ ನಮ್ಮ ರಾಜಧಾನಿ ಬೆಂಗಳೂರಿನ ಹೆಬ್ಬಾಳದ ಚಾಮುಂಡಿ ನಗರ ಮತ್ತು ಗುಡ್ಡದ ಹಳ್ಳಿಯಲ್ಲೇ ರಾಜಾರೋಷವಾಗಿ ನಡೀತಿದೆ.

ಈ ಮಾಫಿಯಾ ಮಂದಿ ಅತ್ಯಂತ ಡೇಂಜರ್​ ಆಗಿರೋ ಗ್ಯಾಸ್​ ಸಿಲಿಂಡರನ್ನು ಮನೆಗಳಲ್ಲಿ, ಸುರಕ್ಷಿತವೇ ಇಲ್ಲದ ಗೋಡೌನ್​, ರಸ್ತೆ ಬದಿಗಳಲ್ಲಿ ಸಂಗ್ರಹಿಸಿ ಭಾರೀ ಅಪಾಯ ತಂದೊಡ್ಡುತ್ತಿದೆ. ಇಂಥಾ ನಿರ್ಲಕ್ಷದಿಂದ ಈಗಾಗ್ಲೇ ನಮ್ಮ ನಾಡಲ್ಲಿ ಭಾರೀ ಅನಾಹುತಗಳು ಸಂಭವಿಸಿವೆ.

ಈಗಲಾದ್ರೂ ಗ್ಯಾಸ್​ ಕಂಪೆನಿಗಳು ಹಾಗೂ ಸರ್ಕಾರ ಎಚ್ಚೆತ್ತುಕೊಂಡು ಈ ಮಾಫಿಯಾದ ಹೆಡೆಮುರಿ ಕಟ್ಟಬೇಕು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ.

ವರದಿ: ರಂಜಿತ್​ ಕುಮಾರ್​ ಹಾಗೂ ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್​​