ಚಾಲನಾ ಪರವಾನಿಗೆ ನೀಡುವ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಪಡಿಸಲು ಕೇಂದ್ರ ಸಾರಿಗೆ ಅಚಿವ ನಿತಿನ್ ಗಡ್ಕರಿ ಕರೆ ನೀಡಿದ್ದಾರೆ.

ನವದೆಹಲಿ: ಚಾಲನಾ ಪರವಾನಿಗೆ ನೀಡುವ ವ್ಯವಸ್ಥೆಯನ್ನು ಇನ್ನಷ್ಟು ಬಿಗಿಪಡಿಸಲು ಕೇಂದ್ರ ಸಾರಿಗೆ ಅಚಿವ ನಿತಿನ್ ಗಡ್ಕರಿ ಕರೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಭಾರತದಲ್ಲಿ ಆರ್’ಟಿಓ ಮೂಲಕ ನೀಡಲಾಗಿರುವ ಶೇ.30 ಲೈಸೆನ್ಸ್’ಗಳು ಬೋಗಸ್ ಆಗಿವೆ. ಆದುದರಿಂದ ಭ್ರಷ್ಟಾಚಾರ-ಮುಕ್ತ ವ್ಯವಸ್ಥೆಯ ಅಗತ್ಯವಿದೆ. ದೇಶಾದ್ಯಂತ 2000 ಚಾಲನಾ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದೆ. ಕಂಪ್ಯೂಟರಿಕೃತ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ 3 ದಿನಗಳಲ್ಲಿ ಲೈಸೆನ್ಸ್ ಸಿಗುವುದು, ಎಂದು ಎಎನ್’ಐಗೆ ತಿಳಿಸಿದ್ದಾರೆ.

ಜೊತೆಗೆ, ಸಾರಿಗೆ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ತಕ್ಷಣ ಕ್ರಮಕೈಗೊಳ್ಳಲಾಗುವಂತಹ ವ್ಯವಸ್ಥೆಯನ್ನು ನಾವು ರೂಪಿಸಬಯಸುತ್ತೇವೆ. ಯಾರಾದರೂ ನಿಯಮ ಉಲ್ಲಂಘಿಸಿದರೆ, ತಕ್ಷಣ ದಂಡದ ಚಲನ್ ಅವರ ಮನೆಗೆ ತಲುಪುವಂತಾಗಬೇಕು, ಎಂದು ಗಡ್ಕರಿ ಹೇಳಿದ್ದಾರೆ.